ನಾಳೆ ಸಾರಿಗೆ ನೌಕರರ ಮುಷ್ಕರ

446

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರು ಈಗಾಗ್ಲೇ ಹಲವು ಬಾರಿ ಮುಷ್ಕರ ಮಾಡಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಆದರೆ, ಅದಕ್ಕೆ ಸರಿಯಾಗಿ ಸ್ಪಂದಿಸಿಲ್ಲವೆಂದು ನಾಳೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಅಖಿಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾಮಂಡಳಿ ಇಂದು ತಿಳಿಸಿದೆ.

ಆರನೇ ವೇತನ ಪರಿಷ್ಕರಣೆ, ಮುಷ್ಕರದ ವೇಳೆ ವಜಾಗೊಳಿಸಿದ್ದ ನೌಕರರ ಪುನರ್ ನಿಯೋಜನೆ, ಅರ್ಧ ವೇತನ ಬಿಟ್ಟು ಪೂರ್ಣ ವೇತನ ಪಾವತಿ ಮಾಡುವುದು, ಸರಿಯಾದ ಸಮಯಕ್ಕೆ ವೇತನ ನೀಡುವ ಸಂಬಂಧ ಸರ್ಕಾಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಬಿ.ಜಯ ದೇವರಾಜ ಅರಸ ತಿಳಿಸಿದರು.

ನಾಳೆ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ ಸಲ್ಲಿಸಲಾಗುವುದು. ಡಿಸೆಂಬರ್ 28ರಂದು ಸಾರಿಗೆ ನಿಗಮಗಳ ಕೇಂದ್ರ ಕಚೇರಿಗಳಾದ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿಯ ಕಚೇರಿಗಳ ಎದುರು ಮುಷ್ಕರ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.


TAG


Leave a Reply

Your email address will not be published. Required fields are marked *

error: Content is protected !!