ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಇಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಮತ್ತೆ ತಮ್ಮ ಪುಂಡಾಟಿಕೆ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಗ್ದಾದ ನಡೆಸಿದರು.
ಪ್ರತಿಭಟನೆಗೆ ವೇದಿಕೆ ಸಜ್ಜುಗೊಳಿಸಿದ್ದರು. ಪೊಲೀಸರು ಭದ್ರತೆಯಲ್ಲಿ ಅದನ್ನು ತೆರವುಗೊಳಿಸಿದ್ದರು. ಈ ವೇಳೆ ಘೋಷಣೆ ಕೂಗುತ್ತಾ ಪೊಲೀಸರೊಂದಿಗೆ ಗಲಾಟೆ ಶುರು ಮಾಡಿದರು. ಆಗ ಅಲ್ಲಿಗೆ ಬಂದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎಂಇಸಿ ಕಾರ್ಯತರ್ಕರ ಮುಖಕ್ಕೆ ಮಸಿ ಬಳೆದು ಕನ್ನಡ ದ್ರೋಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಖಂಡಿಸಿ ನಾಳೆ ಬೆಳಗಾವಿ ಬಂದ್ ಮಾಡುವುದಾಗಿ ಎಂಇಸಿ ಮುಖಂಡರು ಹೇಳಿದರು.