ಜಾನುವಾರುಗಳಿಗೆ ನೀರು ತರಲು ಹೋಗಿ ಮೂವರು ಮಕ್ಕಳ ಸಾವು

333

ಸಿಂಧನೂರು: ಜಾನುವಾರುಗಳಿಗೆ ನೀರು ತರಲು ಹೋದ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ. 10 ವರ್ಷದ ನಾಗರಾಜ, 8 ವರ್ಷದ ಕಾರ್ತಿಕ ಹಾಗೂ 7 ವರ್ಷದ ರವಿಕುಮಾರ ಮೃತ ಮಕ್ಕಳು.

ಕೆರೆಗೆ ನೀರು ತರಲು ಹೋದಾಗ ಕಾಲು ಜಾರಿ ಒಬ್ಬ ಬಾಲಕ ಬಿದ್ದಿದ್ದಾನೆ. ಅವನನ್ನ ಕಾಪಾಡಲು ಮತ್ತೊಬ್ಬ ಜಿಗಿದಿದ್ದಾನೆ. ಅವನನ್ನ ಕಾಪಾಡಲು ಇನ್ನೊಬ್ಬ ಜಿಗಿದಿದ್ದಾನೆ. ಇದ್ರಿಂದಾಗಿ ಮೂರೂ ಮಕ್ಕಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ಸ್ಥಳೀಯರು ಕೆರೆಯ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸ್ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!