ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣದೇವ ಅಬ್ಬರಿಸಿದ್ದಾನೆ. ಗುಡುಗು ಸಹಿತಿ ಭಾರೀ ಮಳೆಯಾಗಿದೆ. ಇದ್ರಿಂದಾಗಿ ಮಹಾನಗರ ಪಾಲಿಕೆಯ ಜನಕ್ಕೆ ಒಂದಿಷ್ಟು ತಂಪು ವಾತಾವರಣ ನಿರ್ಮಾಣವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತ ಜನಕ್ಕೆ ಮಳೆ ಒಂದಿಷ್ಟು ಖುಷಿ ನೀಡಿದೆ.
ರಾಜಾಜಿನಗರ, ಮಲ್ಲೇಶ್ವರಂ, ಗುಟ್ಟಳ್ಳಿ, ಸಂಪಿಗೆ ರೋಡ್, ಶೇಷಾದ್ರಿಪುರಂ, ಆನಂದರಾವ್ ಸರ್ಕಲ್, ಬಸವಶ್ವರನಗರ, ವಿಜಯನಗರ, ಸ್ಯಾಟ್ ಲೈಟ್, ಅತ್ತಿಗುಪ್ಪೆ, ಸೌಥ್ ಎಂಡ್ ಸರ್ಕಲ್, ಗಾಂಧಿ ನಗರ, ಕಲಾಸಿಪಾಳ್ಯ ಸೇರಿದಂತೆ ಎಲ್ಲೆಡೆ ಭರ್ಜರಿ ಮಳೆಯಾಗಿದೆ.