ಪ್ರಜಾಸ್ತ್ರ ಸುದ್ದಿ
ರಾಯಚೂರು: ಫೇಸ್ ಬುಕ್ ಲೈವ್ ಗೆ ಬಂದು ತನ್ನ ಸಾವಿಗೆ ಯಾರು ಕಾರಣವೇನು ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಣದಾಳದಲ್ಲಿ ನಡೆದಿದೆ. ಭೀಮೇಶ್ ನಾಯಕ ಮೃತ ಯುವಕನಾಗಿದ್ದಾನೆ.
ಭೀಮೇಶ್ ನಾಯಕ್ ಹಾಗೂ ಸಂಧ್ಯಾ ಅನ್ನೋ ಯುವತಿ ಪ್ರೀತಿಸುತ್ತಿದ್ದರು. ಅಂತರ್ಜಾತಿಯಾಗಿದ್ದರಿಂದ ಕುಟುಂಬಸ್ಥರು ವಿರೋಧಿಸಿದ್ದರು. ಇದರ ನಡುವೆಯೂ ಇವರಿಬ್ಬರು ಮದುವೆ ಮಾಡಿಕೊಂಡಿದ್ದರು. ಹೀಗಾಗಿ ಇಡಪನೂರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆಗ ಪೊಲೀಸರು ಯುವಕನನ್ನ ಯುವತಿಯಿಂದ ದೂರ ಮಾಡಿದ್ದಾರಂತೆ.
ಈ ಘಟನೆಯಿಂದ ನೊಂದ ಯುವಕ ಫೇಸ್ ಬುಕ್ ಲೈವ್ ಬಂದು ತನಗಾದ ನೋವು ಹಂಚಿಕೊಂಡಿದ್ದಾನೆ. ತನ್ನ ಸಾವಿಗೆ ಪಿಎಸ್ಐ, ಯುವತಿ ತಂದೆ ಸೇರಿದಂತೆ ಹಲವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.