ಸಿಂದಗಿ: ನಟ ಹಾಗೂ ನಿರ್ಮಾಪಕ ಭಾಗ್ಯರಾಜ ಶೆಂಬೇವಾಡ ಅವರ ಮೊದಲ ಚಿತ್ರ ‘ಪಯಣ’ ನಾಳೆ ರಿಲೀಸ್ ಆಗ್ತಿದೆ. ಈ ಕುರಿತು ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ರು.
ಪಯಣ ಸಿನಿಮಾ ಕುರಿತು ಮಾತ್ನಾಡಿದ ಅವರು, ಉತ್ತರ ಕರ್ನಾಟಕ ಭಾಗದ ರೈತರ ಸಮಸ್ಯೆಗಳ ಕಥಾಹಂದರ ಹೊಂದಿದ ಚಿತ್ರವಾಗಿದೆ. ಸುಮಾರು ಒಂದು ತಿಂಗಳ ಕಾಲ ರಾಮನಗರ ಸೇರಿದಂತೆ ಸುತ್ತಲಿನ ಭಾಗಗಳಲ್ಲಿ ಶೂಟಿಂಗ್ ನಡೆಸಲಾಗಿದೆ ಅಂತಾ ಹೇಳಿದ್ರು. ಭಾಗ್ಯರಾಜ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದು ಸುಮಾರು 60 ಲಕ್ಷ ರೂಪಾಯಿ ಬಂಡವಾಳ ಹೂಡಲಾಗಿದೆ ಅಂತಾ ಈ ವೇಳೆ ಹೇಳಿದ್ರು.
ಸಾಕಷ್ಟು ತೊಂದರೆಗಳನ್ನ ಅನುಭವಿಸಿ, ಕುಟುಂಬಸ್ಥರು ಮತ್ತು ಸ್ನೇಹಿತರ ಸಹಾಯದಿಂದ ಸಿನಿಮಾ ಕಂಪ್ಲೀಟ್ ಮಾಡಿದ್ದೇನೆ. ಸಿಂದಗಿ ಭಾಗದ ಕಲಾವಿದ ನಾಯಕನಟನಾಗಿ ನಟಿಸಿದ ಮೊದಲ ಚಿತ್ರ ರಿಲೀಸ್ ಆಗ್ತಿದೆ. ಈ ಬಗ್ಗೆ ಖುಷಿಯಿದೆ. ಇದರಿಂದ ನಾನು ಹಾಕಿದ ಬಂಡವಾಳ ವಾಪಸ್ ಬರುತ್ತೋ ಬಿಡುತ್ತೋ ಗೊತ್ತಿಲ್ಲ. ರೈತರ ಸಮಸ್ಯೆಗಳೇನು ಅನ್ನೋದು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ ಅಂತಾ ಹೇಳಿದ್ರು.
ಪಯಣ ಚಿತ್ರದಲ್ಲಿ ಭಾಗ್ಯರಾಜ ನಾಯಕನಟನಾಗಿ, ಅಕ್ಕನ ಪಾತ್ರದಲ್ಲಿ ಹಿರಿಯ ನಟಿ ಭವ್ಯ, ಅನುಪಮ, ಪಲ್ಲವಿ, ಅಂಜನಪ್ಪ, ಜಾನು, ಜೀತೇಂದ್ರ ಸೈಮನ್ ಸೇರಿದಂತೆ ಹಲವು ನಟ, ನಟಿಯರು ಅಭಿನಯಿಸಿದ್ದಾರೆ. ಜೋಸೈಮನ್ ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಭಾಗ್ಯರಾಜ ಶೆಂಬೇವಾಡ ನಿರ್ಮಾಣ ಮಾಡಿದ್ದಾರೆ ಅಂತಾ ತಿಳಿಸಿದ್ರು.
Subavagali nima ei citra noru dina poryasli 🌸🌸🌸🌸🌸🌸🌼🌼🌼🌼🌼🌼🌺🌺🌺🌺🌺
ಧನ್ಯವಾದಗಳು..