ಉಡುಪಿ ಪ್ರಕರಣ, ಮುತಾಲಿಕ್ ವಾಗ್ದಾಳಿ

164

ಪ್ರಜಾಸ್ತ್ರ ಸುದ್ದಿ

ಹಾವೇರಿ: ಉಡುಪಿಯ ಪಾಲಿ ಟೆಕ್ನಿಕಲ್ ಕಾಲೇಜುವೊಂದರ ಶೌಚಾಲಯದಲ್ಲಿ ಯುವತಿಯ ವಿಡಿಯೋ ಮಾಡಿದ ಪ್ರಕರಣ ಸಂಬಂಧ, ಸರ್ಕಾರ ಹಾಗೂ ಬಿಜೆಪಿ, ಹಿಂದೂಪರ ಸಂಘಟನೆಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಅನ್ಯಕೋಮಿನ ವಿದ್ಯಾರ್ಥಿನಿಯರ ಈ ಪ್ರಕರಣ ಧರ್ಮ, ಜಾತಿ, ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಈ ಕುರಿತು ಮಾತನಾಡಿರುವ ಶ್ರೀರಾಮ್ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಗೃಹ ಸಚಿವರು ಇದನ್ನು ಮಕ್ಕಳಾಟವೆಂದು ಹೇಳುವ ಮೂಲಕ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನವಾಗಿದೆ. ಆದರೆ, ಪ್ರಕರಣ ಮುಚ್ಚಿ ಹಾಕಲು ನಾವು ಬಿಡುವುದಿಲ್ಲ ಎಂದಿದ್ದಾರೆ.

ಈ ಪ್ರಕರಣದಲ್ಲಿ ಸಾಕಷ್ಟು ವಿಡಿಯೋಗಳು ಇರಬಹುದು. ಪೊಲೀಸರು ಬಿಜೆಪಿ ಇದ್ದಾಗ ಅವರ ಪರ, ಕಾಂಗ್ರೆಸ್ ಇದ್ದಾಗ ಇವರ ಪರ ಕೆಲಸ ಮಾಡದೆ ನ್ಯಾಯುತವಾಗಿ ಕೆಲಸ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಅಂತಾ ಆಗ್ರಹಿಸಿದರು.




Leave a Reply

Your email address will not be published. Required fields are marked *

error: Content is protected !!