ಕಾರ್ಕಳದಿಂದಲೇ ಸ್ಪರ್ಧಿಸುತ್ತೇನೆ: ಮುತಾಲಿಕ್

186

ಪ್ರಜಾಸ್ತ್ರ ಸುದ್ದಿ

ಕಾರ್ಕಳ: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸಚಿವ ವಿ.ಸುನೀಲ್ ಕುಮಾರ್ ಜೊತೆಗಿನ ಗುದ್ದಾಟ ಮುಂದುವರೆದಿದೆ.

ಕಾರ್ಕಳದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ, ಅವರ ಒತ್ತಡದಿಂದ ಸ್ಪರ್ಧಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಸ್ಪರ್ಧಿಯಿಂದ ಹಿಂದಕ್ಕೆ ಸರಿಯಲ್ಲ. ಆದರೆ, ನಾನು ಬಿಜೆಪಿ ವಿರೋಧಿಯಲ್ಲ. ನಾನು ಮೋದಿ, ಹಿಂದುತ್ವದ ಪರವಾಗಿದ್ದೇನೆ. ಗೆದ್ದು ಬಂದರೆ ನನ್ನ ಬೆಂಬಲ ಇರುವುದು ಬಿಜೆಪಿಗೆ ಎಂದರು.

ನನ್ನ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಲಾಭ ಎನ್ನುವುದು ಇಲ್ಲ. ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ಇಲ್ಲಿ ನಾನು ಗೆಲ್ಲಬೇಕು. ಹಿಂದುತ್ವ ಗೆಲ್ಲಬೇಕು ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!