ನೇತಾಜಿ ಜಯಂತಿ: 21 ಅಂಡಾಮಾನ್ ದ್ವೀಪಗಳಿಗೆ ವೀರರ ಹೆಸರು

256

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜನವರಿ 23 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ಅವರ 126ನೇ ಜಯಂತಿಯನ್ನು ಪ್ರಧಾನಿ ಮೋದಿ ವರ್ಚ್ಯುಲ್ ಮೂಲಕ ಉದ್ಘಾಟಿಸಿದರು. ಇದೆ ವೇಳೆ ಅಂಡಾಮಾನ್ ನಿಕೋಬಾರ್ ನ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಲಾಗಿದೆ.

ದ್ವೀಪಗಳಿಗೆ ಸುಬೇದಾರ್ ಮತ್ತು ಹೊನಿ ಕ್ಯಾಪ್ಟನ್ (ಆಗ ಲ್ಯಾನ್ಸ್ ನಾಯಕ್) ಕರಮ್ ಸಿಂಗ್, 2ನೇ ಲೆಫ್ಟಿನೆಂಟ್ ರಾಮ ರಾಘೋಬಾ ರಾಣೆ ಸೇರಿದಂತೆ ಇತರೆ 20 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗಿದೆ. ನಾಯಕ್ ಜಾದುನಾಥ್ ಸಿಂಗ್; ಕಂಪನಿ ಹವಾಲ್ದಾರ್ ಮೇಜರ್ ಪಿರು ಸಿಂಗ್; ಕ್ಯಾಪ್ಟನ್ ಜಿಎಸ್ ಸಲಾರಿಯಾ; ಲೆಫ್ಟಿನೆಂಟ್ ಕರ್ನಲ್ (ಆಗಿನ ಮೇಜರ್) ಧನ್ ಸಿಂಗ್ ಥಾಪಾ; ಸುಬೇದಾರ್ ಜೋಗಿಂದರ್ ಸಿಂಗ್; ಮೇಜರ್ ಶೈತಾನ್ ಸಿಂಗ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಇತರ ಪ್ರಶಸ್ತಿ ಪುರಸ್ಕೃತರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೇತಾಜಿ ಅವರ ಸ್ಮರಣೆಯನ್ನು ಗೌರವಿಸಲು, ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಿದರು. ಶಹೀದ್ ದ್ವೀಪ್ ಮತ್ತು ಸ್ವರಾಜ್ ದ್ವೀಪ್ ಎಂದು ಮರುನಾಮಕರಣ ಮಾಡಲಾಗಿದೆ.

ನೇತಾಜಿ ಅವರ ಜಯಂತಿಯನ್ನು ಪರಾಕ್ರಮ್ ದಿವಸ ಎಂದು ಆಚರಿಸಲಾಗುತ್ತೆ. ಹೀಗಾಗಿ ದೇಶಕ್ಕಾಗಿ ತಮ್ಮ ಇಡೀ ಬದುಕನ್ನು ಮುಡುಪಾಗಿದ್ದ ಪರಮವೀರ ಚಕ್ರ ಪ್ರಶಸ್ತಿ ಪಡೆದ ಹುತಾತ್ಮ ಸೈನಿಕರ ಹೆಸರನ್ನು ಅಂಡಾಮಾನ್ ನಿಕೋಬಾರ್ ದ್ವೀಪಗಳಿಗೆ ಇಡುವ ಮೂಲಕ ಗೌರವ ಸಲ್ಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!