ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದಲ್ಲಿ ಏಕರೂಪ ನೀತಿಸಂಹಿತೆ ಜಾರಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಾತನಾಡಿದ ಬೆನ್ನಲ್ಲೇ ಮುಸ್ಲಿಂ ಲಾ ಬೋರ್ಡ್ ತಡರಾತ್ರಿ ಸಭೆ ನಡೆಸಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆ ನಡೆಸಿ ಏಕರೂಪ ನೀತಿಸಂಹಿತೆ ಕುರಿತು ಸುದೀರ್ಘ ಚರ್ಚೆ ನಡೆಸಿದೆ.
ದೇಶದಲ್ಲಿ ಪ್ರತಿಯೊಬ್ಬರಿಗೂ ಒಂದೇ ಕಾನೂನು ಅನ್ವಿಸುವ, ಧರ್ಮ ಆಧಾರತಿ ವೈಯಕ್ತಿಕ ಕಾನೂನುಗಳು, ದತ್ತು ಮತ್ತು ಉತ್ತರಾಧಿಕಾರ ಬದಲಿಸುವುದು ಸೇರಿದಂತೆ ಸಾಕಷ್ಟು ಅಂಶಗಳು ಬದಲಿಸುವ ಕುರಿತು ಇದು ಚರ್ಚಿಸುತ್ತಿದೆ. ಹೀಗಾಗಿ ವಕೀಲರು, ತಜ್ಞರು ನೀಡಿರುವ ಅಂಶಗಳನ್ನು ಪರಾಮರ್ಶಿಸಿ ಕಾನೂನು ಆಯೋಗಕ್ಕೆ ಅಭಿಪ್ರಾಯ ಸಲ್ಲಿಸಲಾಗುತ್ತೆ ಎಂದು ಮುಸ್ಲಿಂ ಕಾನೂನು ಮಂಡಳಿ ತಿಳಿಸಿದೆ.
ಭೋಪಾಲ್ ನಲ್ಲಿ ಮಂಗಳವಾರ ಮಾತನಾಡಿದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದಿಲ್ಲ. ಸಂವಿಧಾನವು ಎಲ್ಲ ನಾಗರೀಕರಿಗೆ ಸಮಾನ ಹಕ್ಕುಗಳನ್ನು ತಿಳಿಸುತ್ತದೆ. ಮತಬ್ಯಾಂಕ್ ರಾಜಕೀಯ, ತುಷ್ಟೀಕರಣದ ಹಾದಿಯನ್ನು ಬಿಜೆಪಿ ತುಳಿಯುವುದಿಲ್ಲವೆಂದು ಹೇಳಿದ್ದರು.