ಪ್ರಜಾಸ್ತ್ರ ಸದ್ದಿ
ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದು, ಇದೆ ರೀತಿ ಗುಮ್ಮಟನಗರಿಯಲ್ಲೂ ಲೋಕಾಯುಕ್ತರ ದಾಳಿ ನಡೆದಿದೆ. ಪಿಡಬ್ಲುಡಿ ಇಲಾಖೆಯ ಜೆಇ ಭೀಮನಗೌಡ ಬಿರಾದಾರ ಮನೆ ಹಾಗೂ ಸಂಬಂಧ ಶ್ರೀಕಾಂತ ಅಂಗಡಿ ಮನೆ ಮೇಲೂ ದಾಳಿ ನಡೆಸಲಾಗಿದೆ.
ಪಿಡಬ್ಲುಡಿಯ ಬಸವನಬಾಗೇವಾಡಿಯ ಪ್ರಭಾರಿ ಎಇಇ ಆಗಿಯೂ ಭೀಮನಗೌಡ ಬಿರಾದಾರ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ದೇಬಿಹಾಳ ಕುಡಿಯುವ ನೀರು ಸರಬರಾಜು ಇಲಾಖೆ ಅಸಿಸ್ಟೆಂಟ್ ಎಇಇ ಜೆಪಿ ಶೆಟ್ಟಿ ಎಂಬುವರ ಸ್ವಗ್ರಾಮವಾದ ಸಾಸನೂರಿನಲ್ಲಿರುವ ಮನೆಯ ಮೇಲೂ ದಾಳಿ ನಡೆಸಲಾಗಿದೆ.
ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ 3 ಡಿವೈಎಸ್ಪಿ, 7 ಇನ್ಸ್ ಪೆಕ್ಟರ್ ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.