ಬೆಂಗಳೂರು: ಕರೋನಾ ಲಾಕ್ ಡೌನ್ ಇರುವುದ್ರಿಂದ ಹೊರ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ 7 ದಿನಗಳ ಕ್ವಾರಂಟೈನ್ ಮಾಡಲಾಗ್ತಿದೆ. ಇದರ ನಡುವೆ ಎರಡು ತಿಂಗಳ ಬಳಿಕ ವಿಮಾನ ಸೇವೆ ಶುರುವಾಗಿದೆ. ಹೀಗಾಗಿ ದೆಹಲಿಯಿಂದ ಬೆಂಗಳೂರಿಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಬಂದಿದ್ದಾರೆ.
ಹೀಗೆ ವಿಮಾನ ನಿಲ್ದಾಣಕ್ಕೆ ಬಂದವರೆ ಸೀದಾ ತಮ್ಮ ಅಧಿಕೃತ ಕಾರನ್ನ ಏರಿ ಹೊರಟಿದ್ದಾರೆ. ಈ ವೇಳೆ ಅವರನ್ನ ಪ್ರಶ್ನಿಸಿದಾಗ, ತಾವು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಿದ್ದು, ಕ್ವಾರಂಟೈನ್ ನಿಂದ ತಮ್ಗೆ ವಿನಾಯ್ತಿ ಇದೆ ಎಂದು ಹೇಳಿ ಹೋಗಿದ್ದಾರೆ ಅನ್ನೋದು ತಿಳಿದು ಬಂದಿದೆ.
ರೆಡ್ ಝೋನ್ ನಲ್ಲಿರುವ ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಿಂದ ಬಂದವರನ್ನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗ್ತಿದೆ. ಆದ್ರೆ, ಈ ನಿಯಮವನ್ನ ಮೀರಿ ಕೇಂದ್ರ ಸಚಿವರು, ಮನೆಗೆ ಹೋಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಇಂಥಾ ರಾಜಕಾರಣಿಗಳಿಂದಾಗಿಯೇ ಜನಸಾಮಾನ್ಯರಿಗೊಂದು ಕಾನೂನು ಉಳ್ಳುವರಿಗೊಂದು ಕಾನೂನು ಅನ್ನೋ ಮಾತಿರುವುದು.