ಉನ್ನಾವೋ ಸಂತ್ರಸ್ತೆಗೆ ಹೆಚ್ಚು ಬೆದರಿಕೆ: ಸಿಬಿಐ

308

ನವದೆಹಲಿ: ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಾಕಷ್ಟು ಬೆದರಿಕೆಯನ್ನ ಎದುರಿಸ್ತಿದ್ದಾಳೆ ಎಂದು ಸಿಬಿಐ ಇಂದು ವಿಶೇಷ ಕೋರ್ಟ್ ಗೆ ತಿಳಿಸಿದೆ. ಈ ಪ್ರಕರಣದ ತನಿಖೆ ನಡೆಸ್ತಿರುವ ಸಿಬಿಐ ಕೋರ್ಟ್ ಗೆ ಈ ಮಾಹಿತಿ ನೀಡಿದೆ.

ಬೆದರಿಕೆ ಕಾರಣದಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರನ್ನು ಬೇರೆ ಕಡೆ ಸ್ಥಳಾಂತರಿಸಬಹುದು ಅನ್ನೋದರ ಕುರಿತು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ತಿಳಿಸಿದೆ. ಜುಲೈನಲ್ಲಿ ನಡೆದ ಕಾರು ಅಪಾಘತದಲ್ಲಿ ಆಕೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ.

ಸಂತ್ರಸ್ತೆಯ ಕಾರು ಅಪಘಾತ

ಈ ಅಪಘಾತದ ಹಿಂದೆ ಮಾಜಿ ಬಿಜೆಪಿ ಶಾಸಕ ಕುಲದೀಪ ಸಿಂಗರ್ ಅವರ ಕೈವಾಡವಿದೆ ಅನ್ನೋದು ಆಕೆಯ ಕುಟುಂಬಸ್ಥರ ಆರೋಪವಾಗಿದೆ. ಹೀಗಾಗಿ ಸಿಬಿಐ ಈ ನಿಟ್ಟಿನಲ್ಲಿಯೂ ತನಿಖೆ ನಡೆಸ್ತಿದೆ. ಇತ್ತೀಚೆಗೆ ಆಸ್ಪತ್ರೆಯಲ್ಲಿ ಕೋರ್ಟ್ ರೂಂವೊಂದು ಸ್ಥಾಪಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಆರೋಪಿ ಮತ್ತು ಸಂತ್ರಸ್ತೆ ನಡುವೆ ಒಂದು ಪರದೆಯನ್ನ ಹಾಕಲಾಗಿತ್ತು.




Leave a Reply

Your email address will not be published. Required fields are marked *

error: Content is protected !!