ನವದೆಹಲಿ: ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತೀರ್ಪು ಇಂದು ಹೊರ ಬರಲಿದೆ. ದೆಹಲಿ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ.
ಬಿಜೆಪಿಯ ಉಚ್ಛಾಟಿತ ಲೀಡರ್ ಕುಲದೀಪ ಸಿಂಗ್ ಸೆಂಗಾರ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. 2017ರಲ್ಲಿ ಇವರ ವಿರುದ್ಧ ಕೇಸ್ ದಾಖಲಾಗಿದೆ. ನಾಲ್ಕು ಬಾರಿ ಬಿಜೆಪಿ ಶಾಸಕರಾಗಿರುವ ಕುಲದೀಪ ವಿರುದ್ಧ ಕೇಳಿಬಂದ ಆರೋಪದಿಂದ ಇಡೀ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತು. ಈಗಾಗ್ಲೇ ನಾಲ್ಕು ಬಾರಿ ವಾದ ಪ್ರತಿವಾದ ಆಲಿಸಲಾಗಿದ್ದು, ಇಂದು ತೀರ್ಪು ಹೊರ ಬೀಳಲಿದೆ.
ಡಿಸೆಂಬರ್ 5ರಂದು ಸಂತ್ರಸ್ತೆ ರಾಯ್ ಬರೇಲಿಗೆ ಬರುವಾಗ ಬೆಳ್ಳಂಬೆಳಗ್ಗೆ 4.30ಕ್ಕೆ ಬೈಸ್ವಾರ್ ಬಿಹಾರ್ ರೈಲು ನಿಲ್ದಾಣದ ಹತ್ತಿರದ ಗೌರಾ ಕ್ರಾಸ್ ನಲ್ಲಿ ಆಕೆಯನ್ನ ತಡೆದ ದುಷ್ಕರ್ಮಿಗಳು ಸೀಮೆ ಎಣೆ ಸುರಿದು ಬೆಂಕಿ ಹಚ್ಚಿದ್ರು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ, ಸುಮಾರು 36 ಗಂಟೆಗಳ ಬಳಿಕ ಸಂತ್ರಸ್ತೆ ಕೊನೆಯುಸಿರೆಳೆದ್ಳು. ಈ ಪ್ರಕರಣದಲ್ಲಿ 6 ಜನ ಆರೋಪಿಗಳಿದ್ದಾರೆ.