ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿಯಿಟ್ಟ ದುರುಳರು

485

ಲಖನೌ: ಉತ್ತರ ಪ್ರದೇಶದ ಉನ್ನಾವ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಸಿದ ಘಟನೆ ನಡೆದಿದೆ. ಇಂದು ಬೆಳಗ್ಗೆ ಕೋರ್ಟ್ ಗೆ ಬರುತ್ತಿರುವಾಗ ಈ ಘಟನೆ ನಡೆದಿದೆ.

ರಾಯ್ ಬರೇಲಿಗೆ ಬರುವ ಸಲುವಾಗಿ ಬೆಳ್ಳಂಬೆಳಗ್ಗೆ 4.30ಕ್ಕೆ ಬೈಸ್ವಾರ್ ಬಿಹಾರ್ ರೈಲು ನಿಲ್ದಾಣಕ್ಕೆ ಹೊರಡ್ತಿದ್ದ ಟೈಂನಲ್ಲಿ, ಗೌರಾ ಕ್ರಾಸ್ ನಲ್ಲಿ ಆಕೆಯತನ್ನ ತಡೆದ ದುಷ್ಕರ್ಮಿಗಳು ನೋಡು ನೋಡ್ತಿದಂತೆ ಸೀಮೆ ಎಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಿತಿ ಗಂಭೀರವಿದೆ ಎಂದು ತಿಳಿದು ಬಂದಿದೆ.

ಸಂತ್ರಸ್ತೆ ಹೇಳಿಕೆ ಪ್ರಕಾರ 6 ಜನ ನೀಚರು ಇದರಲ್ಲಿ ಭಾಗಿಯಾಗಿದ್ರು. ಮೊದಲು ತಲೆಗೆ ಹೊಡೆದು ಚಾಕುವಿನಿಂದ ಕುತ್ತಿಗೆ ಇರಿದಿದ್ದಾರೆ. ನಂತ್ರ ಬೆಂಕಿ ಹಚ್ಚಿದ್ದಾರೆ ಅಂತಾ ತಿಳಿಸಿದ್ದಾರೆ. ಹರಿಶಂಕರ ತ್ರಿವೇದಿ, ಶುಭಂ, ಕಿಶೋರ, ಉಮೇಶ ಮತ್ತು ಇನ್ನಿಬ್ಬರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಅಂತಾ ತಿಳಿಸಿದ್ದಾರೆ. ಇದರಲ್ಲಿ ಇಬ್ಬರು ಅತ್ಯಾಚಾರ ಪ್ರಕರಣದ ಆರೋಪಿಗಳಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ವಿರುದ್ಧ ಸಂತ್ರಸ್ತೆ ಕೋರ್ಟ್ ಮೆಟ್ಟಲು ಹತ್ತಿದ್ರು. ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರನ್ನ ಜಾಮೀನು ಮೇಲೆ ಬಿಡಲಾಗಿತ್ತು. ಇದೀಗ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದೆ. ಇದು ನಿಜಕ್ಕೂ ಅತ್ಯಂತ ದುರಂತ ಸಂಗತಿ. ಸಂತ್ರಸ್ತೆಗೆ ಇಷ್ಟೊಂದು ಹಿಂಸೆ ನೀಡ್ತಿದ್ರೂ ನೀಚರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಆಗದೆ ಹೋಗ್ತಿರುವುದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!