ಇಂದಿನಿಂದ ‘ಮಹಾ’ ಅಧಿವೇಶನ ಶುರು

330

ಮುಂಬೈ: ‘ಮಹಾ ವಿಕಾಸ ಅಘಾಡಿ’ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಶುರುವಾಗಲಿದೆ. ಮೈತ್ರಿ ಸರ್ಕಾರದ ಮೊದಲ ಚಳಿಗಾಲದ ಅಧಿವೇಶನ ಇದಾಗಿದ್ದು ಸಿಎಂ ಉದ್ಧವ್ ಠಾಕ್ರೆ ಎದುರು ಸಾಕಷ್ಟು ಸವಾಲುಗಳಿವೆ. ಮೂರು ಪಕ್ಷಗಳು ಸೇರಿಕೊಂಡು ರಚಿಸಿರುವ ಸರ್ಕಾರಕ್ಕೆ ಬಿಜೆಪಿ ವಿರೋಧ ಪಕ್ಷವಾಗಿದ್ದು ಠಾಕ್ರೆ ಸರ್ಕಾರ ಕಟ್ಟಿಹಾಕಲು ಏನ್ ಮಾಡುತ್ತೆ ಅನ್ನೋ ಕುತೂಹಲವಿದೆ.

ನವೆಂಬರ್ 28 ರಂದ್ರು ಪ್ರಮಾಣ ವಚನ ಸ್ವೀಕಾರ ಟೈಂನಲ್ಲಿ ಸಿಎಂ ಹಾಗೂ ಇಬ್ಬರು ಸಚಿವರಾಗಿ ಪದಗ್ರಹಣ ಮಾಡಿದ್ರು. ಇದಾದ್ಮೇಲೆ 6 ಶಾಸಕರಿಗೆ ಮಂತ್ರಿಸ್ಥಾನ ನೀಡಲಾಗಿದೆ. ಉಳಿದ ಖಾತೆಗಳೆಲ್ಲವೋ ಸಿಎಂ ಠಾಕ್ರೆ ಬಳಿಯಿದೆ. ಡಿಸೆಂಬರ್ 21ರ ನಂತ್ರ ಸಂಪುಟ ಪುನರ್ ರಚನೆಯಾಗಲಿದೆ. ಬುಲೆಟ್ ಸೇರಿ ಇತರೆ ಯೋಜನೆಗಳ ಮರುಪರಿಶೀಲನೆ, ಕೃಷಿ ಬಿಕ್ಕಟ್ಟು, ರೈತರಿಗೆ ಪರಿಹಾರ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಿಎಂ ನಿಲುವು ಬಿಜೆಪಿಗೆ ಅಸ್ತ್ರವಾಗುವ ಎಲ್ಲ ಲಕ್ಷಣಗಳಿವೆ.




Leave a Reply

Your email address will not be published. Required fields are marked *

error: Content is protected !!