ಉನ್ನಾವೋ ಘಟನೆ ಖಂಡಿಸಿ ಅಖಲೇಶ ಧರಣಿ

300

ನವದೆಹಲಿ: ಉನ್ನಾವೋ ಸಂತ್ರಸ್ತೆ ಸಾವಿನಿಂದಾಗಿ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಸಾಮೂಹಿಕ ಅತ್ಯಾಚಾರವೆಸಗಿದ 23 ವರ್ಷದ ಸಂತ್ರಸ್ತೆ ಮೇಲೆ ಡಿಸೆಂಬರ್ 5ರಂದು ಅಟ್ಯಾಕ್ ಮಾಡಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ರು. ನಿನ್ನೆ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ.

ಇಡೀ ಘಟನೆಯನ್ನ ಖಂಡಿಸಿರುವ ವಿರೋಧ ಪಕ್ಷಗಳು ಹೈದ್ರಾಬಾದ್ ಘಟನೆಯಲ್ಲಿ ಕಾಮುಕರಿಗೆ ನೀಡಿದ ಶಿಕ್ಷೆ ರೀತಿಯಲ್ಲಿ ಉನ್ನಾವೋ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ರು. ಉತ್ತರ ಪ್ರದೇಶ ಮಾಜಿ ಸಿಎಂ ಅಖಲೇಶ ಯಾದವ, ಸಿಎಂ ಯೋಗಿ ಆದಿತ್ಯನಾಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಭದ್ರತೆ ನೀಡುವ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಅಂತಾ ಕಿಡಿ ಕಾರಿದ್ರು.

ಸಮಾಜವಾದಿ ಪಕ್ಷದ ಮುಖ್ಯಸ್ಥೆ, ಮಾಜಿ ಸಿಎಂ ಅಖಿಲೇಶ ಯಾದವ ಲಖನೌ ವಿಧಾನ ಭವನದ ಆವರಣದಲ್ಲಿ ಧರಣಿ ನಡೆಸಿದ್ದಾರೆ. ಇನ್ನು ಉನ್ನಾವೋ ಘಟನೆಯನ್ನ ಖಂಡಿಸಿರುವ ಬಿಎಸ್ಪಿ ಅಧ್ಯಕ್ಷೆ ಮಾಯಾವತಿಯನ್ನ ತೀವ್ರವಾಗಿ ಖಂಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!