ಕರೋನಾ ಭಯಕ್ಕೆ ಚಿಕಿತ್ಸೆ ನೀಡದ ವೈದ್ಯರು: ಅಮಾಯಕ ಜೀವ ಬಲಿ

359

ಬೆಂಗಳೂರು: ಕರೋನಾ ಭಯದಿಂದಾಗಿ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡದ ಪರಿಣಾಮ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ 47 ವರ್ಷದ ಸತ್ಯಮ್ಮ ಎಂಬುವರು ಖಾಸಗಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆಗೆ ಸಾವನ್ನಪ್ಪಿದ್ದಾರೆ.

ಬೈರಸಂದ್ರದ ನಿವಾಸಿ ಸತ್ಯಮ್ಮ, ಶನಿವಾರ ಸಂಜೆ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ದಾಖಲಾಗಿದ್ರು. ನಿನ್ನೆ ರಾತ್ರಿ ಅವರಲ್ಲಿ ಗಂಭೀರತೆ ಕಂಡು ಬಂದಿದೆ. ಹೀಗಾಗಿ ಅಪೋಲಾ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದಾರೆ. ಆಂಬ್ಯುಲೆನ್ಸ್ ಮೂಲಕ ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಬಂದ್ರೆ, ಇಲ್ಲಿನ ಸಿಬ್ಬಂದಿ ಅವರನ್ನ ದಾಖಲೆ ಮಾಡಿಕೊಳ್ಳದೆ ಹೊರಗೆ ನಿಲ್ಲಿಸಿದ್ದಾರೆ. ಇದ್ರಿಂದಾಗಿ ಸತ್ಯಮ್ಮ ಆಂಬ್ಯುಲೆನ್ಸ್ ನಲ್ಲಿ ಸಾವನ್ನಪ್ಪಿದ್ದಾರಂತೆ.

ಘಟನೆ ಖಂಡಿಸಿ ಸಂಬಂಧಿಕರು ಪ್ರತಿಭಟನೆಗೆ ಮುಂದಾದಾಗ ದಾಖಲು ಮಾಡಿಕೊಂಡ ಒಂದು ಗಂಟೆಯೊಳಗೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!