ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಇದನ್ನು ಈಗ್ಲೇ ಬರೆದಿಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸದನದಲ್ಲಿ ಮಾತ್ನಾಡಿದ ಅವರು, ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೀಗೆ ಹೇಳಿದ್ರು.
ನಾನು ಜಾಮೀನು ಮೇಲೆ ಹೊರಗಿದ್ದೀನಿ ಎಂದಿದ್ದೀರಿ. ನಿಮ್ಮ ರಾಷ್ಟ್ರೀಯ ನಾಯಕರು ಎಷ್ಟು ಮಂದಿ ಬೇಲ್ ಮೇಲೆ ಹೊರಗೆ ಇದ್ದಾರೆ. ನನ್ನ ಮೇಲೆ ಇಂತಹ ನೂರು ಕೇಸ್ ಹಾಕಿದ್ರೂ ಎದುರಿಸುವ ಶಕ್ತಿ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ್ರು.