‘ಉ.ಕ’ದ ಜಾತ್ರೆಗಳು ಬಂದ್.. ‘ದ.ಕ’ದ ಜಾತ್ರೆಗಳು ಜೋರು..

249

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಂಕ್ರಮಣದ ನಿಮಿತ್ತ ಶುಕ್ರವಾರ ಹಾಗೂ ಶನಿವಾರ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿನ ಪ್ರಸಿದ್ಧ ದೇವಸ್ಥಾನಗಳ ಜಾತ್ರೆಯನ್ನು, ಕೋವಿಡ್ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಯಾದಗಿರಿ ಜಿಲ್ಲೆಯ ಮೈಲಾಪುರ ಮಲ್ಲಯ್ಯ ಜಾತ್ರೆ, ಬಾಗಲಕೋಟೆಯ ಬಾದಾಮಿ ಬನಶಂಕರಿ ಜಾತ್ರೆ, ಬೆಳಗಾವಿಯ ಸವದತ್ತಿ ಯಲ್ಲಮ್ಮ ಜಾತ್ರೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ.

ಈ ನಿರ್ಬಂಧ ಬರೀ ಉತ್ತರ ಕರ್ನಾಟಕ ಭಾಗದ ದೇವಸ್ಥಾನಗಳಿಗೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ಯಾಕಂದರೆ, ಶುಕ್ರವಾರ ಉಡುಪಿಯಲ್ಲಿ ಭರ್ಜರಿ ರಥೋತ್ಸವ ನಡೆದಿದೆ. ಈ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇಲ್ಲಿ ಯಾವುದೇ ಕೋವಿಡ್ ಮಾರ್ಗಸೂಚಿನೂ ಇಲ್ಲ, ಜಾತ್ರೆ ನಿರ್ಬಂಧದ ಮಾತೇ ಇಲ್ಲ. ಸರ್ಕಾರದ ಈ ನಡೆ ಉತ್ತರ ಕರ್ನಾಟಕ ಭಾಗದ ಜನರನ್ನು ಕೆರಳಿಸಿದೆ.




Leave a Reply

Your email address will not be published. Required fields are marked *

error: Content is protected !!