ಬಸ್ ನಲ್ಲಿ ಚಿಲ್ಲರೆ ಕೇಳಿದರೆ ಜೈಲು ಶಿಕ್ಷೆ ಅಂತೆ.. ಇದ್ಯಾವ ಕಾನೂನು ಸ್ವಾಮಿ..

606

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಾಯು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಕಾಣಿಸುತ್ತಿರುವ ಪೋಸ್ಟರ್ ಇದೀಗ ದೊಡ್ಡ ಸಮಸ್ಯೆಯೊಂದು ಸೃಷ್ಟಿಸಿದೆ. ಅಲ್ದೇ, ಜನರಿಂದ ಹಣ ಸೂಲಿಗೆಯ ಮತ್ತೊಂದು ಪ್ರಯತ್ನವೆಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಅದೇನು ಅಂದರೆ, ಬಸ್ ಗಳಲ್ಲಿ ಸಂಚರಿಸುವಾಗ ಚಿಲ್ಲರೆ ಕೇಳುವುದು ಸಾರ್ವಜನಿಕ ಸೇವಕನಿಗೆ ಅಡ್ಡಿಪಡಿಸುವುದು ಎಂದು ಭಾವಿಸಲಾಗುವುದು ಎಂದು ಪೋಸ್ಟರ್ ಅಂಟಿಸಲಾಗಿದೆ.

ಚಿಲ್ಲರೆ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಎಂದು ಕಂಡು ಬಂದರೆ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಸಾಧ್ಯತೆ ಇರುವುದಾಗಿ ಪೋಸ್ಟರ್ ಅಂಟಿಸಲಾಗಿದೆ. ವಾಯು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 6 ಜಿಲ್ಲೆಗಳಲ್ಲಿ 8 ವಿಭಾಗಗಳ ಮೂಲಕ 4,428 ಗ್ರಾಮಗಳಿಗೆ ಸೇವೆ ಸಲ್ಲಿಸುತ್ತಿದೆ. ಬಸ್ ಗಳಲ್ಲಿ ಇದೀಗ ಕಾಣಿಸುತ್ತಿರುವ ಪೋಸ್ಟರ್ ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದ್ದು, ತಮ್ಮ ಹಣ ತಾವು ಕೇಳಿದರೆ ಜೈಲು ಶಿಕ್ಷೆ ಅನ್ನೋದು ಇದ್ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!