ಸಿಂದಗಿ: ಪಟ್ಟಣದಲ್ಲಿ ಇಂದು ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯ್ತು. ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರದ ವತಿಯಿಂದ ಪೂಜೆ ಸಲ್ಲಿಸುವ ಮೂಲಕ ವಿಶ್ವಕರ್ಮ ಜಯಂತಿಗೆ ಅಧಿಕೃತವಾಗಿ ಚಾಲನೆ ನೀಡಲಾಯ್ತು.
ಬಳಿಕ ತಹಶೀಲ್ದಾರ್ ಕಚೇರಿಯಿಂದ ವಿಶ್ವಕರ್ಮ ಅವರ ಭಾವಚಿತ್ರ ಹೊತ್ತ ರಥದ ಮುಖೇನ ಬೃಹತ್ ಮೆರವಣಿಗೆ ನಡೆಸಲಾಯ್ತು. ಮೆರವಣಿಗೆ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳು ವಿಶ್ವಕರ್ಮ ಸಮಾಜದ ಕುರಿತಾದ ಹಾಡುಗಳಿಗೆ ಸುಂದರವಾಗಿ ಹೆಜ್ಜೆ ಹಾಕಿದ್ವು. ವಿವೇಕಾನಂದ ಸರ್ಕಲ್ ಮಾರ್ಗವಾಗಿ ಸಾಗಿ ನೀಲಗಂಗಮ್ಮಾ ದೇವಸ್ಥಾನ, ಹಳೇ ಬಜಾರ್ ರೋಡ್ ಮೂಲಕ ತೆರಳಿ ಕಾಳಿಕಾ ದೇವಸ್ಥಾನದ ಬಳಿ ಮುಕ್ತಾಯಗೊಳಿಸಲಾಯ್ತು.
ಈ ವೇಳೆ ಮೂರುಜಾವೇದೇಶ್ವರ ಮಠದ ಶ್ರೀಗಳಾದ ರಾಮಚಂದ್ರ ಮಹಾಸ್ವಾಮಿಗಳು, ಚಿದಾನಂದ ಆಚಾರ್ಯ, ತಹಶೀಲ್ದಾರ್ ಬಿ.ಎಸ್ ಕಡಕಬಾವಿ, ಜೆಡಿಎಸ್ ಮುಖಂಡ ಅಶೋಕ ಮನಗೂಳಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ದಯಾನಂದ ಪತ್ತಾರ, ಯುವ ಘಟಕದ ಅಧ್ಯಕ್ಷ ಶಿವು ಬಡಗೇರ ಸೇರಿದಂತೆ ಅನೇಕರು ಭಾಗವಹಿಸಿದ್ರು.