ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಸೈಕಲ್ ಡ್ರೀಮ್ಸ್ ಪ್ರಜೆಂಟ್ಸ್, ಹಾಫ್ ಚಿತ್ರ ತಂಡದ ಸಹಕಾರದೊಂದಿಗೆ ಮೊದಲ ವೆಬ್ ಸಿರೀಸ್ ಟೈಟಲ್ ಲಾಂಚ್ ಮಾಡಲಾಗಿದೆ.
ನಗರದ ಮಲ್ಲತ್ತಹಳ್ಳಿಯ ಸೂರ್ಯ ಮಿನಿ ಥಿಯೇಟರ್ ನಲ್ಲಿ ‘ಅರ್ಪಣೆ’ ಅನ್ನೋ ವೆಬ್ ಸಿರೀಸ್ ಟೈಟಲ್ ನ್ನ ನಿರ್ದೇಶಕ, ನಟ ಲೋಕೇಂದ್ರ ಸೂರ್ಯ ಬಿಡುಗಡೆ ಮಾಡಿದ್ರು. ಈ ವೇಳೆ ಮಾತ್ನಾಡಿದ ಅವರು, ರಂಗಭೂಮಿ ಅನುಭವ ಇರುವ ತಂಡ ವೆಬ್ ಸಿರೀಸ್ ಮಾಡ್ತಿದೆ. ಆ ತಂಡಕ್ಕೆ ಒಳ್ಳೆಯದಾಗ್ಲಿ. ರಂಗಭೂಮಿ ರಿಯಲ್. ಸಿನಿಮಾ ಫೇಕ್. ಅಂದ್ರೆ ಸಿನಿಮಾದಲ್ಲಿ ಕಟ್ ಆ್ಯಕ್ಷನ್ ಹೇಳಲು ಸಮಯ ಇರುತ್ತೆ. ನಾಟಕದಲ್ಲಿ ಹಾಗಲ್ಲ. ಹೀಗಾಗಿ ಇಂತಹ ಅನುಭವ ಇರುವ ನಿರ್ದೇಶಕ ಯಶವಂತ ಕಾರ್ಗಳ್ಳಿ, ಲೇಖಕ ನಾಗೇಶ ತಳವಾರ ಅವರ ತಂಡ ಒಳ್ಳೆ ಕಥೆ ನೀಡುತ್ತೆ ಅನ್ನೋ ನಂಬಿಕೆಯಿದೆ. ಆ ತಂಡಕ್ಕೆ ಒಳ್ಳೆಯದಾಗ್ಲಿ ಅಂತಾ ಹೇಳಿದ್ರು.
ನಿರ್ಮಾಪಕ ರಾಜು ಕಲ್ಕುಣಿ, ಸಂಸ್ಕೃತಿ ಚಿಂತಕ ಹಾಗೂ ಗಾಯಕರಾದ ಲಕ್ಷ್ಮೀರಾಮ ನಟಿಯರಾದ ಆಸಿಯಾ, ಅಥಿರಾ ಶುಭ ಹಾರೈಸಿದ್ರು.
ಇನ್ನು ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಹಾಗೂ ನಿರ್ದೇಶಕ ಯಶವಂತ ಕಾರ್ಗಳ್ಳಿ ಮಾತ್ನಾಡಿ ಅರ್ಪಣೆ ರೂಪ ಪಡೆದುಕೊಂಡು ಬಗ್ಗೆ ತಿಳಿಸಿದ್ರು.
ಈ ವೇಳೆ ಶಬ್ಬೀರ ಸೂಡಿ, ವಿಜಯಕುಮಾರ ಪೂಜಾರಿ, ಪ್ರಕಾಶ ಏಳುಗುಡ್ಡ, ಲಕ್ಷ್ಮಣ ಬೆಳಗಾವಿ, ಅನುಷ್ಕ, ಅಮೂಲ್ಯ, ಗುರು ಭಾರದ್ವಾಜ, ರಾಕೇಶ ಹಾಗೂ ಅಯಾಸಿಸ್ ತಂಡದ ಸದಸ್ಯರು ಉಪಸ್ಥಿತಿಯಿದ್ದರು.