ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಕೋವಿಡ್ ರೂಪಾಂತರ ಓಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಎಲ್ಲೆಡೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ, ಗ್ರಾಮಾಂತರ ಶಾಸಕರ ಒಡೆತನದ ಶಾಲೆ ಹಾಗೂ ಕಾಲೇಜು ಇಂದೂ ಸಹ ಓಪನ್ ಇದೆ.
ಗ್ರಾಮಾಂತರ ಬಿಜೆಪಿ ಶಾಸಕ ಅಶೋಕ್ ನಾಯ್ಕ್ ಅವರ ಒಡೆತನದ ಅಕ್ಷರ ಸ್ಕೂಲ್ ಹಾಗೂ ಕಾಲೇಜು ಇಂದೂ ಸಹ ಕಾರ್ಯ ನಿರ್ವಹಿಸಿದೆ. ಈ ಮೂಲಕ ಸರ್ಕಾರದ ಆದೇಶವನ್ನು ಆಡಳಿತ ಪಕ್ಷದ ಶಾಸಕರೆ ಪಾಲಿಸುತ್ತಿಲ್ಲ.