ಕಾಗವಾಡ: ಕರೋನಾದಿಂದ ಲಾಕ್ ಡೌನ್ ಆಗಿ ಎಣ್ಣೆ ಪ್ರಿಯರು ಸಾಕಷ್ಟು ಒದ್ದಾಡ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಲ್ಲಲ್ಲಿ ಎಣ್ಣೆ ಅಂಗಡಿಗಳ ಕಳ್ಳತನ ನಡೆಯುತ್ತಿವೆ. ಇದೀಗ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಭಾಗ್ಯಲಕ್ಷ್ಮೀ ಮದ್ಯದ ಅಂಗಡಿ ಕಳ್ಳನತನ ಮಾಡಲಾಗಿದೆ.
ಉಗಾರ ಹಾಗೂ ಶೇಡಬಾಳ ಮಾರ್ಗಕ್ಕೆ ಹೊಂದಿಕೊಂಡಿರುವ ಸಂಜು ಬಿರಡಿ ಎಂಬವರಿಗೆ ಸೇರಿದ ಭಾಗ್ಯಲಕ್ಷ್ಮೀ ಮದ್ಯದ ಅಂಗಡಿ ಹಿಂಬದಿಯಿಂದ ನುಗ್ಗಿ 15 ಸಾವಿರ ರೂಪಾಯಿ ಮೌಲ್ಯದ ಮದ್ಯದ ಬಾಟಲಗಳನ್ನು ದೋಚಿಕೊಂಡು ಹೋಗಿದ್ದಾರೆ.
ಈ ಕುರಿತು ಅಂಗಡಿ ಮಾಲೀಕ ಸಂಜು ಬಿರಡಿಯವರು ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿ ಮಹೇಶ ದೂಳನ್ನವರ ಹಾಗೂ ಸಿಬ್ಬಂದಿ ಘಟಣಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಗಡಿ ಓಪನ್ ಎಂದು ಓಡೋಡಿ ಬಂದರು..
ಮದ್ಯದ ಅಂಗಡಿ ಬಾಗಿಲನ್ನ ತೆರದಿದ್ದನ್ನ ನೋಡಿದ ಕೆಲವರು ವೈನ್ ಶಾಪ್ ಪ್ರಾರಂಭವಾಗಿದೆ ಎಂದು ಭಾವಿಸಿ ಓಡೋಡಿ ಬಂದಿದ್ದಾರೆ. ಬೈಕ್, ಕಾರುಗಳನ್ನ ರಸ್ತೆ ಬದಿಗೆ ನಿಲ್ಲಿಸಿ ಮದ್ಯ ಖರೀದಿಗೆ ಅಂಗಡಿ ಮುಂದೆ ಮುಗಿಬಿದ್ದಿದ್ರು. ಪೊಲೀಸ್ರು ಉಗಿದ್ಮೇಲೆ ಎಣ್ಣೆ ಇಲ್ವಾ ಎಂದು ಶಪಿಸುತ್ತಾ ಹೋಗಿದ್ದಾರೆ.