ಪ್ರಜಾಸ್ತ್ರ ಅಪರಾಧ ಸುದ್ದಿ
ಚಿಕ್ಕಬಳ್ಳಾಪುರ: ಕಳೆದ ಜುಲೈ 15ರಂದು ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಪಶುಪತಿ ಅಲಿಯಾಸ್ ಪಪಿಯಾ ಹಾಗೂ ಧೀರಜ್ ಕುಮಾರ್ ಎಂಬುವರನ್ನು ಬಂಧಿಸಲಾಗಿದ್ದು, ಇನ್ನೊಬ್ಬನ ಶೋಧ ಕಾರ್ಯ ನಡೆದಿದೆ.
ಆರೋಪಿ ಪಶುಪತಿ ಅಂಚನಾ ತುಳಿಸಿಯಾನ ಅನ್ನೋ ಮಹಿಳೆ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ. ಕೆಲ ದಿನಗಳ ಬಳಿಕ ಕೆಲಸ ಬಿಟ್ಟಿದ್ದ. ನಂತರ ಮಾಲೀಕರ ಮನೆಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ ವೇಳೆ ಅಂಚನಾಳನ್ನು ಹತ್ಯೆ ಮಾಡಿದ್ದರು.