ಯೋಗ ದಿನಾಚರಣೆ ಪ್ರಯುಕ್ತ ಕವಿವಿಯಲ್ಲಿ ಒಂದು ವಾರ ವೆಬಿನಾರ್

313

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ, ಕರ್ನಾಟಕ ವಿಶ್ವವಿದ್ಯಾಲಯ, ಯೋಗ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಧಾರವಾಡ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ವಿಶೇಷವಾಗಿ ಯೋಗ ದಿನಾಚರಣೆ ಆಚರಿಸಲಾಗ್ತಿದೆ.

ಯೋಗ ದಿನಾಚರಣೆ ಪ್ರಯುಕ್ತ ಸೋಮವಾರ ಮಧ್ಯಾಹ್ನ 3.30ಕ್ಕೆ ಆರೋಗ್ಯದಲ್ಲಿ ಯೋಗದ ಮಹತ್ವ ಎಂಬ ವಿಷಯದ ಕುರಿತು ಒಂದು ವಾರದ ವೆಬಿನಾರ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮವನ್ನ ಕವಿವಿಯ ಕುಲಪತಿ ಪ್ರೊ.ಕೆ.ಬಿ.ಗುಡಸಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ತೆಲಂಗಾಣದ ವಿದ್ಯಾ ಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಸಂಘಟನಾ ಕಾರ್ಯದರ್ಶಿ ಜಿ.ಆರ್ ಜಗದೀಶ, ಕವಿವಿಯ ಸಿಂಡಿಕೇಟ್ ಸದಸ್ಯರಾದ ಸುಧೀಂದ್ರ ದೇಶಪಾಂಡೆ, ಕವಿವಿಯ ಕಲಾ ನಿಖಾಯದ ಡೀನ್ ಪ್ರೊ ಎಸ್‌.ಸಿ.ಶೆಟ್ಟರ ಭಾಗವಹಿಸಲಿದ್ದಾರೆ.

ಇನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸತ್ಯಜಿತ ಕಡಕೋಳ. ಡಾ.ಜ್ಯೋತಿ ಸಾಂಗ್ಲಿ, ವಿನಾಯಕ ತಲಗೇರಿ ಭಾಗವಹಿಸಲಿದ್ದಾರೆ ಎಂದು ಕವಿವಿಯ ಎನ್ ಎಸ್ ಎಸ್ ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ, ನೆಹರು ಯುವ ಕೇಂದ್ರದ ಸಂಯೋಜನಾ ಅಧಿಕಾರಿ ಗೌತಮ ರೆಡ್ಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!