ಪ್ರಜಾಸ್ತ್ರ ಸುದ್ದಿ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ಇತ್ತೀಚೆಗೆ ಅದ್ಧೂರಿಯಾಗಿ ನರವೇರಿತು. ಈ ವೇಳೆ ಮನೋವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಶ್ರಫ್ ಶೇಖ್ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.
ಪ್ರಾಧ್ಯಾಪಕ ಡಾ.ಷಣ್ಮುಕ ಕಾಂಬಳೆ ಅವರ ಮಾರ್ಗದರ್ಶನದಲ್ಲಿ ‘ಫಾರ್ಗಿವನೆಸ್ ಕೋಪಿಂಗ್ ಸ್ಟ್ರ್ಯಾಟಜಿಸ್ ಇನ್ ರಿಲೇಶನ್ ಟು ಸೈಕಾಲಾಜಿಕಲ್ ವೆಲ್ ಬಿಯಿಂಗ್ ಆಫ್ ಪೀಪಲ್ ಹಾರ್ಟ್ ಇನ್ ರಿಲೇಶನ್ ಶಿಪ್’ ಅನ್ನೋ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರಿನ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಎಚ್.ಡಿ ಪಡೆದಿರುವ ಅಶ್ರಫ್ ಶೇಖ್ ಅವರಿಗೆ ಕುಟುಂಬಸ್ಥರು, ಸಹೋದ್ಯೋಗಿಗಳು, ಸ್ನೇಹಿತರು ಶುಭ ಕೋರಿದ್ದಾರೆ.