ಸಿಂದಗಿ: ರಂಜಾನ್ ತಿಂಗಳ ಇರುವ ಕಾರಣ ಹೆಂಡ್ತಿಯ ಊರಿಗೆ ಹೋದವನು, ಬಾವಿಯಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿದ ಘಟನೆ ಮಾಡಬಾಳ ಗ್ರಾಮದಲ್ಲಿ ನಡೆದಿದೆ. 25 ವರ್ಷದ ನಬಿಲಾಲ ಮೈಬೂಬುಸಾಬ ಡೋಣೂರು ಸಾವನ್ನಪ್ಪಿದ್ದ ಯುವಕ.
ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಅರವಿಂದ ದೇಸಾಯಿಯವರ ಬಾಯಿಯಲ್ಲಿ ಈಜಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ಭೈರವಾಡಗಿ ಗ್ರಾಮದ ಯುವಕ ನಬಿಲಾಲ ಹೆಂಡತಿಯ ಊರಿಗೆ ಬಂದಿದ್ದ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಬಂದು, ಮೃತದೇಹವನ್ನ ಹೊರ ತೆಗೆಯಲಾಗಿದೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅನಾಹುತ ನಡೆದಿದೆ. ಯುವಕನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.