ಸಿಂದಗಿ: ಪಟ್ಟಣದ ಗೋಲಗೇರಿ ರಸ್ತೆಯಲ್ಲಿರುವ ಕೆರೆಯ ಒಡ್ಡು ಬಿರುಕು ಬಿಟ್ಟಿದೆ. ಹೀಗಾಗಿ ಸ್ಥಳಕ್ಕೆ ಶಾಸಕ ಎಂ.ಸಿ ಮನಗೂಳಿ ಅಧಿಕಾರಿಗಳ ಜೊತೆ ಭೇಟಿ ನೀಡಿದ್ರು.
ಸಣ್ಣ ನೀರಾವರಿ ಇಲಾಖೆಯ ಸುಪ್ರಿಡೆಂಟ್ ಎಂಜಿನಿಯರ್ ಸತೀಶಕುಮಾರ ಹಾಗೂ ಸಿಬ್ಬಂದಿಯ ಜೊತೆ ಶಾಸಕರು ಕೆರೆಗೆ ಭೇಟಿ ನೀಡಿದ್ರು. ಬಿರುಕು ಬಿಟ್ಟಿರುವ ಕೆರೆಯ ಒಡ್ಡನ್ನು ದುರಸ್ಥಿಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ರು. ಇದಕ್ಕಾಗಿ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಿ ವಾಯ್ ಬಿರಾದಾರ, ಕಾಮಗಾರಿಯ ಗುತ್ತಿಗೆದಾರ ಎಸ್.ಸಿ ಕರ್ನಾಳ ಹಾಗೂ ತಂತ್ರಜ್ಞಾನ ಅಧಿಕಾರಿಗಳು ಹಾಜರಿದ್ರು.