ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬಿಜೆಪಿ ಹಾಗೂ ಸಧ್ಯದ ಪರಿಸ್ಥಿತಿಗೆ ಹೆದರುವವರು ಪಕ್ಷವನ್ನ ಬಿಡಬಹುದು ಮತ್ತು ನಿರ್ಭೀತ ನಾಯಕರು ಪಕ್ಷಕ್ಕೆ ಬರಬಹುದು ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ ಹೇಳಿದ್ದಾರೆ.
ಅನ್ಲೈನ್ ಕಾರ್ಯಕ್ರಮವೊಂದರಲ್ಲಿ ಮಾತ್ನಾಡಿದ ರಾಹುಲ ಗಾಂಧಿ, ಭಯ ಹೊಂದಿರುವವರು ಪಕ್ಷ ಬಿಡಲು ಸ್ವತಂತ್ರರು. ಭಯ ಪಡದ ಹಲವು ನಾಯಕರಿದ್ದಾರೆ. ಕೆಲ ಆರ್ ಎಸ್ಎಸ್ ನವರಿದ್ದು ಅವರು ಪಕ್ಷ ಬಿಟ್ಟು ಹೋಗಬಹುದು. ನಮಗೆ ಅವರು ಬೇಡ. ನಮಗೆ ನಿರ್ಭೀತ ಜನರು ಬೇಕು.
ಜೂಮ್ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ 3,500 ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ರು. ಇವರನ್ನುದ್ದೇಶಿಸಿ ರಾಹುಲ ಗಾಂಧಿ ಮಾತ್ನಾಡಿದ್ರು.