ಪ್ರಜಾಸ್ತ್ರ ಸುದ್ದಿ
ನೆಲಮಂಗಲ: ಮನೆ ಮುಂದೆ ಆಟವಾಡುತ್ತಾ ಹೋದ 11 ತಿಂಗಳ ಮಗುವೊಂದು ಚರಂಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಸೋಂಪುರ ಹೋಬಳಿಯಲ್ಲಿ ನಡೆದಿದೆ. ರಾಜಕುಮಾರ್ ಅನ್ನೋ ಮಗು ಮೃತಪಟ್ಟಿದೆ.
ಸೋಂಪುರಿನ ನಿಡವಂದ ಕಾಲೋನಿಯಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಉಮೇಶ್ ಸಿಂಗ್ ಹಾಗೂ ಅನಿತಾ ದೇವಿ ಎಂಬುವರ ಮಗು ಆಟವಾಡುತ್ತಾ ಹೋಗಿ 4 ಅಡಿಯ ಚರಂಡಿಗೆ ಬಿದ್ದಿದೆ. ಇತ್ತ ಮನೆಯವರು ಮಗುವನ್ನು ಎಲ್ಲೆಡೆ ಹುಡುಕಿದ್ದಾರೆ. ನಂತರ ಮಗು ಚರಂಡಿಯಲ್ಲಿ ಪತ್ತೆಯಾಗಿದೆ.
ಬಿಹಾರ ರಾಜ್ಯದ ಬಕ್ಸಾರ್ ಜಿಲ್ಲೆಯ ನೋನ್ ಪುರ ದಂಪತಿ ದಾಬಸ್ ಪೇಟೆ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.