ಅಯ್ಯೋ ಶಿವನೆ ಇದೆಂಥಾ ವಿಕೃತ ಆನಂದ..

296

 ಪ್ರಜಾಸ್ತ್ರ ಸುದ್ದಿ

ಮಂಡ್ಯ: ಮನುಷ್ಯ ಕೆಲವೊಮ್ಮೆ ದಾಖಲೆ, ಸಾಹಸ ಅನ್ನೋ ನೆಪದಲ್ಲಿ ಅತಿ ಸ್ವಾರ್ಥಿಯಾಗಿ ನಡೆದುಕೊಳ್ತಾನೆ. ಹೀಗಾಗಿ ತನ್ನ ಖುಷಿಗೆ ಬೇರೆಯವರನ್ನ, ಮೂಕ ಪ್ರಾಣಿಗಳನ್ನ ಬಳಸಿಕೊಂಡು ವಿಕೃತ ಆನಂದ ಪಡುತ್ತಾನೆ. ಮಂಡ್ಯದಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ.

ಜಿಲ್ಲೆಯ ಎಚ್.ಮಲ್ಲಿಗೇರಿ ಅನ್ನೋ ಗ್ರಾಮದಲ್ಲಿ ಜೋಡೆತ್ತಿನ ಗಾಡಿಗೆ ಬರೋಬ್ಬರಿ 14.55 ಟನ್ ಕಬ್ಬಿನ ರಾಶಿ ತುಂಬಿ 3 ಕಿಲೋ ಮೀಟರ್ ವರೆಗೂ ಬಲವಂತವಾಗಿ ಎಳೆಸಿದ ಘಟನೆ ನಡೆದಿದೆ. ಇದನ್ನ ನೋಡಿದ ನಿಜವಾದ ರೈತರು, ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಗಾಡಿಯಲ್ಲಿ 4-5 ಟನ್ ಕಬ್ಬ ಹೇರುವುದು ಸಾಮಾನ್ಯ ಹಾಗೂ ಅದು ಎತ್ತುಗಳ ಹಿತದೃಷ್ಟಿಯಿಂದಲೂ ಒಳ್ಳೆಯದು. ಆದ್ರೆ, ದಾಖಲೆಯ ಹುಚ್ಚಿಗೆ ಬರೋಬ್ಬರಿ 14.55 ಟನ್ ಕಬ್ಬ ಹೇರಿರುವುದು ಯಾವ ನ್ಯಾಯ? ಮೂಕ ಪ್ರಾಣಿಗಳ ವೇದನೆ ತಿಳಿಯದ ಅವಿವೇಕಿಗಳು ಇಷ್ಟೊಂದು ಕ್ರೌರ್ಯದಿಂದ ನಡೆದುಕೊಂಡಿರುವುದು ನಿಜಕ್ಕೂ ನೋವಿನ ಸಂಗತಿ.




Leave a Reply

Your email address will not be published. Required fields are marked *

error: Content is protected !!