ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಿರ್ದೇಶಕ ದಿನಕರ ತೂಗುದೀಪ ಅವರು ಕೆಲ ಮಾಧ್ಯಮಗಳ ವಿರುದ್ಧ ಅಸಮಾಧನ ಹೊರ ಹಾಕಿದ್ದಾರೆ. ಇದಕ್ಕೆ ಕಾರಣವಾಗಿರುವುದು ಅವರ ಮುಂದಿನ ಚಿತ್ರದ ಕುರಿತು ಮಾಡ್ತಿರುವ ಸುದ್ದಿಯ ವಿಚಾರಕ್ಕೆ. ದಿನಕರ ಹೊಸ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿದ್ದಾರೆ. ಇದಕ್ಕೆ ಇನ್ನೂ ಕಲಾವಿದರ ಆಯ್ಕೆ ಆಗಿಲ್ಲ.
ಕೆಲ ಮಾಧ್ಯಮಗಳು ದಿನಕರ ಅವರ ಮುಂದಿನ ಚಿತ್ರಕ್ಕೆ ಇಂತಹ ನಟ, ನಟಿಯರು ಎಂದು ಹೇಳಿ ಸುದ್ದಿ ಮಾಡ್ತಿರುವುದಕ್ಕೆ ಟ್ವೀಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಿ ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಅಧಿಕೃತವಾಗಿ ಹೇಳುತ್ತೇನೆ ಎಂದಿದ್ದಾರೆ.