ಪ್ರಜಾಸ್ತ್ರ ಸುದ್ದಿ
ತುಮಕೂರು: ಫ್ಲೆಕ್ಸ್ ಗಳನ್ನು ಹರಿದು ಹಾಕಿದ ವಿಚಾರ ಸಂಬಂಧ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಈ ಕುರಿತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ನಾಲಿಗೆ ಹರಿಬಿಟ್ಟಿದ್ದು, ಕ್ಯಾತ್ಸಂದ್ರ ಪಿಎಸ್ಐಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಆವಾಜ್ ಹಾಕಿದ್ದಾರೆ.
ಸೂ.. ಮಗ, ಬೋ.. ಮಗ ಎಂದು ಬಾಯಿಗೆ ಬಂದಂತೆ ಜೆಡಿಎಸ್ ಕಾರ್ಯಕರ್ತನನ್ನು ಬೈದು ಅವನನ್ನು ಒದ್ದು ಎಳೆಕೊಂಡು ಬರಬೇಕು. ಇಲ್ಲಂದರೆ ಸ್ಟೇಷನ್ ಮುಂದೆ ಬಂದು ಧರಣಿ ಕುಳಿತುಕೊಳ್ಳತೀನಿ. ಸಾವಿರಾರು ಜನರನ್ನು ಕರೆಕೊಂಡು ಬರುತ್ತೀನಿ. ಜೆಡಿಎಸ್ ನವರು ಏನು ದಬ್ಬಾಳಿಕೆ ಮಾಡಕ್ಕೆ ಬರ್ತಾರೆ ಇಲ್ಲಿ. ನಿನಗೆ 24 ಗಂಟೆ ಟೈಂ ಕೊಡ್ತೀನಿ. ಎಳಕೊಂಡು ಬಂದು ಇರೋ ಬರೋ ಕೇಸ್ ಹಾಕಿ ಒಳಗ ಹಾಕು ಎಂದು ಆವಾಜ್ ಹಾಕಿದ್ದಾರೆ.
ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರ ಅವಾಚ್ಯ ಶಬ್ಧಗಳನ್ನು ಕೇಳಿದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಓರ್ವ ಪೊಲೀಸ್ ಅಧಿಕಾರಿಗೆ ಯಾವ ರೀತಿ ಧಮ್ಕಿ ಹಾಕುತ್ತಾರೆ ನೋಡಿ ಎಂದು ಟೀಕಿಸುತ್ತಿದ್ದಾರೆ.
ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಮೊನ್ನೆ ಗ್ರಾಮಾಂತರ ಕ್ಷೇತ್ರಕ್ಕೆ ಬಂದಿತ್ತು. ಹೀಗಾಗಿ ಎಲ್ಲೆಡೆ ಕುಮಾರಸ್ವಾಮಿ, ಜೆಡಿಎಸ್ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿದ್ದವು. ಬ್ಯಾತ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ಬ್ಯಾನರ್ ಹರಿದಿದ್ದರು. ಇದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಗೆ ಕಾರಣವಾಗಿತ್ತು.