ಪ್ರಜಾಸ್ತ್ರ ಸುದ್ದಿ
ಸೋಮವಾರಪೇಟೆ: ಎಸ್ಟೇಟ್ ಯೊಳಗೆ ಹಸುಗಳು ಬರುತ್ತಿವೆ ಅನ್ನೋ ಕಾರಣಕ್ಕೆ, ಅವುಗಳಿಗೆ ವಿಷದ ಬಾಳೆ ಹಣ್ಣು ತಿನಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಈ ಘಟನೆ ನಡೆದಿದೆ.
ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ತೋಟದೊಳಗೆ ಹಸುಗಳು ಬರುತ್ತಿವೆ ಎಂದು, ಮ್ಯಾನೇಜರ್ ಹಾಗೂ ಸಿಬ್ಬಂದಿ ಸೇರಿಕೊಂಡು ವಿಷದ ಬಾಳೆಹಣ್ಣು ತಿನಿಸಿ ಹಸುಗಳನ್ನ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾವನ್ನಪ್ಪಿದ ಹಸುಗಳನ್ನ ಎಸ್ಟೇಟ್ ನಲ್ಲಿಯೇ ಕಂದಕ ತೆಗೆದು ಮುಚ್ಚಿ ಹಾಕಿದ್ದು, ಅದರ ಮೇಲೆ ಮರಗಳನ್ನ ಕಡಿದು ಹಾಕಿದ್ದಾರಂತೆ. ಹಸುಗಳು ಕಾಣಿಯಾಗಿರುವುದಕ್ಕೆ ಗ್ರಾಮಸ್ಥರು ಅನುಮಾನ ಬಂದು ಹುಡುಕಿದಾಗ ಪ್ರಕರಣ ಬೆಳಕಿಗೆ ಬಂದೆ ಎನ್ನಲಾಗ್ತಿದೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.