ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ತಾಳಿಕೋಟೆ: ನೂತನ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶನಿವಾರ ಮೂವರು ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಹೀಗಾಗಿ ಸಹಜವಾಗಿ ಗ್ರಾಮಸ್ಥರುಲ್ಲಿ ಒಂದಿಷ್ಟು ಆತಂಕ ಮೂಡಿದೆ. ಇದ್ರಿಂದಾಗಿ ಗ್ರಾಮಸ್ಥರು ಸ್ವಯಂಘೋಷಿತ ಬಂದ್ ಗೆ ಮುಂದಾಗಿದ್ದಾರೆ.
ಕಿರಾಣಿ ಅಂಗಡಿಯವರು, ಹೋಟೆಲ್ ಮಾಲೀಕರು, ತರಕಾರಿ ವ್ಯಾಪಾರಿಗಳು ಸೇರಿದಂತೆ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳ ಮಾಲೀಕರು, ಒಂದು ವಾರಗಳ ಸ್ವಯಂಘೋಷಿತ ಬಂದ್ ಗೆ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿಕೊಂಡಿದ್ದಾರೆ.
ಗ್ರಾಮದ ಪ್ರಮುಖ ಮಾರುಕಟ್ಟೆಯಲ್ಲಿ ಸೇರಿದ ಗ್ರಾಮದ ಪ್ರಮುಖರು, ವ್ಯಾಪಾರಸ್ಥರು ಸೇರಿಕೊಂಡು ಚರ್ಚಿಸಿ, ಗ್ರಾಮದ ಒಳ್ಳೆಯ ದೃಷ್ಟಿಯಿಂದ ಈ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.