ಪ್ರಜಾಸ್ತ್ರ ಸುದ್ದಿ
ದಿಸ್ಪುರ್: ಅಸ್ಸಾಂನಲ್ಲಿ ಭರ್ಜರಿ ಮಳೆಯಾಗ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇದುವರೆಗೂ 79 ಜನ ಹಾಗೂ 108 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸಿಎಂ ಜೊತೆ ಪ್ರಧಾನಿ ಮೋದಿ ಮಾತ್ನಾಡಿದ್ದು, ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ.
ಅಸ್ಸಾಂನ ಪ್ರಸಿದ್ಧ ಕಾಂಜಿರಂಗ ಪಾರ್ಕ್ ಹಾಗೂ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ಇದ್ರಿಂದಾಗಿ, 82 ಜಿಂಕೆಗಳು, 9 ಘೆಂಡಾಮೃಗ, 7 ಕಾಡು ಹಂದಿ, 4 ಕಾಡೆಮ್ಮೆ, 2 ಸಾರಂಗ ಸೇರಿದಂತೆ 108 ಕಾಡುಪ್ರಾಣಿಗಳು ಮೃತಪಟ್ಟಿವೆ.
ಅಸ್ಸಾಂ ಸಿಎಂ ಸರ್ವಾನಂದ ಸೋನವಾಲ್, ಸರಣಿ ಸಭೆಗಳನ್ನ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ತಿದ್ದಾರೆ. ಕೇಂದ್ರದ ನೆರವಿನ ಭರವಸೆ ಸಹ ಸಿಕ್ಕಿದೆ.