ವಿಜಯಪುರ ಎಸ್ಪಿಗೆ ಕೋವಿಡ್ ಸೋಂಕಿನ ಶಂಕೆ

427

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಎಸ್ಪಿ ಅವರಿಗೆ ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಆತಂಕ ಶುರುವಾಗಿದೆ.

ಕೃಷ್ಣಾ ನದಿ ತುಂಬಿದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಆಲಮಟ್ಟಿಗೆ ಆಗಮಿಸಿ ಬಾಗಿನ ಅರ್ಪಿಸುವ ಸಾಧ್ಯತೆಯಿದೆ. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿನ ಬಂದೋಬಸ್ತಿ ಸಂಬಂಧ ಎಸ್ಪಿ ಅನುಪಮ ಅಗರವಾಲ್ ಅವರು, ಎರಡು ದಿನಗಳಿಂದ ಆಲಮಟ್ಟಿಯ ಡ್ಯಾಂ, ಸಭೆಯ ಸಭಾಂಗಣ ಸೇರಿ ಹಲವಡೆ ಓಡಾಟ ನಡೆಸಿದ್ರು.

ಇಂದು ಆಲಮಟ್ಟಿ ಕಾರ್ಯಕ್ರಮಕ್ಕೆ ಎಸ್ಪಿ ಗೈರಾಗಿದ್ದಾರೆ. ಎಸ್ಪಿಗೆ ಕೋವಿಡ್ 19 ಪಾಸಿಟಿವ್ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮ ಸಂಬಂಧ ಪೊಲೀಸ್ ಇಲಾಖೆಯಲ್ಲಿ ಟೆನ್ಷನ್ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!