ಪ್ರಜಾಸ್ತ್ರ ಸುದ್ದಿ
ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಿಕಾರಿಪುರ ಖಾಲಿ ಮಾಡುತ್ತಿದ್ದೇನೆ. ನನ್ನ ಮಗ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದಾರೆ.
ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಸಿಎಂ ಸ್ಥಾನದಿಂದಲೇ ಅರ್ಧಕ್ಕೆ ಕೆಳಗಿಳಿಸಿರುವ ಹೈಕಮಾಂಡ್ ಬಿಎಸ್ವೈಗೆ 2023ರ ಚುನಾವಣೆಯಲ್ಲಿ ಟಿಕೆಟ್ ನೀಡೋದು ಡೌಟ್ ಎನ್ನಲಾಗುತ್ತಿದ್ದು, ಶಿಕಾರಿಪುರದಿಂದ ಮಗ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿರುವುದು ಈಗಲೇ ಟಿಕೆಟ್ ಕನ್ಫರ್ಮ್ ಆಗಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದು, ಹಲವು ಗೊಂದಲ ಮೂಡಿಸಿದೆ.