ಪ್ರಜಾಸ್ತ್ರ ಸುದ್ದಿ
ಗೋಕಾಕ: ಸ್ವಪಕ್ಷೀಯದವರ ವಿರುದ್ಧ ಸದಾ ವಾಗ್ದಾಳಿ ಮಾಡುತ್ತಲೇ ಇರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, 2,500 ಕೋಟಿ ಕೊಡಿ ಸಿಎಂ ಮಾಡ್ತೀವಿ ಎಂದಿದ್ರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ದೆಹಲಿಯಿಂದ ಬಂದವರು 2,500 ಕೋಟಿ ಕೊಡಿ ಮುಖ್ಯಮಂತ್ರಿ ಮಾಡ್ತೀವಿ ಅಂದಿದ್ದರು. 2,500 ಕೋಟಿ ಅಂದರೆ ಏನು? ಕೋಣೆಯಲ್ಲಿ ಇಡೋದಾ, ಗೋದಾಮಿನಲ್ಲಿ ಇಡೋದಾ ಎಂದು ಪ್ರಶ್ನಿಸಿದೆ. ಟಿಕೆಟ್ ಕೊಡ್ತೀನಿ ಎಂದು ಎಲ್ಲ ಕಡೆ ಮೋಸ ಮಾಡುತ್ತಾರೆ. ಬಿಜೆಪಿಯಲ್ಲಿ ರೊಕ್ಕ ಇದ್ದವರು ಮಂತ್ರಿಯಾಗುತ್ತಾರೆ. ನಾನು ರೊಕ್ಕ ಕೊಡವನಲ್ಲ. ನಿರಾಣಿ ರೊಕ್ಕ ಕೊಟ್ಟು ಮಂತ್ರಿ ಆದ ಕ್ಯಾಂಡಿಡೇಟ್ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅದ್ಜಸ್ಟ್ ಮೆಂಟ್ ಸರ್ಕಾರ ನಡೆಯುತ್ತಿದೆ. ಬಿಜೆಪಿ ಮಹಾನ್ ನಾಯಕರು, ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ನಡುವೆ ಅಡ್ಜಸ್ಟ್ ಮೆಂಟ್ ರಾಜಕೀಯ ಇದೆ. ರಾತ್ರಿ ಹೊತ್ತು ಇವರೆಲ್ಲ ಮಾತನಾಡಿಕೊಳ್ಳುತ್ತಾರೆ. ಶಾಸಕರು ಹುಚ್ಚು ನಾಯಿಗಳು, ಸರ್ ಸರ್ ಎಂದು ಹಿಂದೆ ಹೋಗುತ್ತವೆ ಅಂತಾ ವಾಗ್ದಾಳಿ ನಡೆಸಿದರು.