ಸಿಂದಗಿ: ಪಟ್ಟಣದಲ್ಲಿಂದು ಸಂವಿಧಾನ ಸಮರ್ಪಣಾ ದಿನಾಚರಣೆಯನ್ನ ಆಚರಿಸಲಾಯ್ತು. ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಸಲಾಯ್ತು.
ಕಾರ್ಯಕ್ರಮಕ್ಕೂ ಮೊದ್ಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯ್ತು. ಬಳಿಕ ಸರ್ಕಾರಿ ಕನ್ನಡ ಶಾಲೆ ಮತ್ತು ಅಂಜುಮಾನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನಕುಮಾರ ಸಂವಿಧಾನ ಪ್ರಸ್ತಾವನೆ ಕುರಿತು ಮಾತ್ನಾಡಿದ್ರು.
ಫಾ.ಅಂತೋನಿದಾಸ್, ಫಾ.ಜೆರಾಲ್ಡ್ ಡಿಸೋಜಾ, ಫಾ.ಲುಮ್ನೇಶ ಸ್ವರೂಪಕುಮಾರ, ಫಾ.ಆಲ್ವಿನಾ ಡಿಸೋಜಾ, ಸಿಸ್ಟರ್ ಅನಿತಾ ಡಿಸೋಜಾ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ.ಸಿ ಮಯೂರ, ಅಜಯಕುಮಾರ, ರಮೇಶ ಆಸಂಗಿ, ವಿನಾಯಕ ಗುಣಸಾಗರ, ಶರಣಪ್ಪ ಹಿರೇಕುರಬರ, ಶಿವಾಜಿ ಮೆಟಗಾರ, ಅಶೋಕ ಚಲವಾದಿ, ಡಾ.ದಸ್ತಗಿರಿ ಮುಲ್ಲಾ ಸೇರಿದಂತೆ ಅನೇಕರು ಭಾಗವಹಿಸಿದ್ರು. ಅಂಬಣ್ಣ ಜಿವಣಗಿ ಹಾಗೂ ರಘು ಜಾಯಿ ಕ್ರಾಂತಿಗೀತೆ ಹಾಡಿದ್ರು.