ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 29 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಹಳಬರು, ಹೊಸಬರು, ಮಿತ್ರ ಮಂಡಳಿಯ ಶಾಸಕರು ಸಿಎಂ ಬೊಮ್ಮಾಯಿ ಸಂಪುಟ ಸೇರಿದರು.
ಕೆ.ಎಸ್.ಈಶ್ವರಪ್ಪ(ಶಿವಮೊಗ್ಗ), ಆರ್.ಅಶೋಕ್ (ಪದ್ಮನಾಭ ನಗರ), ಬಿಸಿ ಪಾಟೀಲ್ (ಹಿರೇಕೇರೂರು), ಡಾ.ಸಿ.ಎನ್.ಅಶ್ವತ್ಥ ನಾರಾಯಣ(ಮಲ್ಲೇಶ್ವರ), ಬಿ.ಶ್ರೀ ರಾಮುಲು(ಮೊಳಕಾಲುಮ್ಮೂರು), ಉಮೇಶ್ ಕತ್ತಿ (ಹುಕ್ಕೇರಿ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಬೈರತಿ ಬಸವರಾಜ(ಕೆ ಆರ್ ಪುರಂ), ಮುರುಗೇಶ್ ನಿರಾಣಿ(ಬಿಳಿಗಿ), ಶಿವರಾಂ ಹೆಬ್ಬಾರ್(ಯಲ್ಲಾಪುರ), ಶಶಿಕಲಾ ಜೊಲ್ಲೆ(ನಿಪ್ಪಾಣಿ), ಕೆಸಿ ನಾರಾಯಣ್ ಗೌಡ(ಕೆಆರ್ ಪೇಟೆ), ಸುನೀಲ್ ಕುಮಾರ್(ಕಾರ್ಕಳ), ಅರಗ ಜ್ಞಾನೇಂದ್ರ(ತೀರ್ಥಹಳ್ಳಿ), ಗೋವಿಂದ ಕಾರಜೋಳ(ಮುಧೋಳ), ಮುನಿರತ್ನ(ಆರ್ ಆರ್ ನಗರ), ಎಂ.ಟಿ.ಬಿ ನಾಗರಾಜ್(ಎಂ ಎಲ್ ಸಿ), ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ಮಾಧುಸ್ವಾಮಿ(ಚಿಕ್ಕನಾಯಕನಹಳ್ಳಿ), ಹಾಲಪ್ಪ ಆಚಾರ್(ಯಲ್ಬುರ್ಗ) ಶಂಕರ್ ಪಾಟೀಲ್ ಮುನೇನಕೊಪ್ಪ(ನವಲುಗುಂದ), ಕೋಟಾ ಶ್ರೀನಿವಾಸ ಪೂಜಾರಿ(ಎಂಎಲ್ ಸಿ), ಪ್ರಭು ಚೌವ್ಹಾಣ್(ಔರಾದ್), ವಿ ಸೋಮಣ್ಣ(ಗೋವಿಂದ್ ರಾಜನಗರ), ಎಸ್ ಅಂಗಾರ(ಸುಳ್ಯ), ಆನಂದ್ ಸಿಂಗ್(ಹೊಸಪೇಟೆ), ಸಿ.ಸಿ ಪಾಟೀಲ್(ನರಗುಂದ) ಹಾಗೂ ಬಿಸಿ ನಾಗೇಶ್(ತಿಪಟೂರು) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು.
33 ಸಚಿವ ಸ್ಥಾನಗಳಲ್ಲಿ 29 ಜನರು ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಇನ್ನು 4 ಸ್ಥಾನಗಳು ಉಳಿದಿದ್ದು, ಮುಂದೆ ಯಾರಿಗೆ ಸಚಿವ ಸ್ಥಾನ ಒಲಿಯುತ್ತೆ ಕಾದು ನೋಡಬೇಕು.