ಬೆಂಗಳೂರು: ರಾಜಭವನದ ಗಾಜಿನಮನೆಯಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ 17 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಕ್ಷೇತರ ಶಾಸಕ ಹೆಚ್. ನಾಗೇಶ ಸೇರಿ ಒಟ್ಟು 17 ಜನ ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪ್ರಮಾಣ ವಚನ ಬೋಧಿಸಿದ್ರು.
17 ಜನ ನೂತನ ಸಚಿವರಲ್ಲಿ 7 ಜನ ಲಿಂಗಾಯತರು, 3 ಒಕ್ಕಲಿಗರು, ವಾಲ್ಮೀಕಿ ಕೋಟಾದಲ್ಲಿ 1, ದಲಿತ ಎಡಗೈಯಿಂದ ಒಂದು, ಈಡಿಗ 1, ಬ್ರಾಹ್ಮಣ 1, ಕುರುಬ 1, ಪಕ್ಷೇತರ ಶಾಸಕರಿಗೆ 1. ಇದು 17 ಜನ ನೂತನ ಸಚಿವರ ಜಾತಿ ಲೆಕ್ಕಾಚಾರ.
ಇನ್ನು 8 ಬಾರಿ ಶಾಸಕರಾಗಿರುವ ಉಮೇಶ ಕತ್ತಿ, ಎಂ.ಪಿ ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ ಸೇರಿ ಅನೇಕ ಘಟಾನುಘಟಿ ಬಿಜೆಪಿ ನಾಯಕರಿಗೆ ಮಂತ್ರಿಗಿರಿ ಸಿಕ್ಕಿಲ್ಲ. ಶಶಿಕಲಾ ಜೊಲ್ಲೆ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ. ಹೀಗಾಗಿ ಸಚಿವ ಸ್ಥಾನದ ಆಸೆ ಇಟ್ಟುಕೊಂಡಿದ್ದ ಬಿಜೆಪಿಯ ಕೆಲ ಹಿರಿಯ ನಾಯಕರಿಗೆ ಹಿನ್ನೆಡೆಯಾಗಿದ್ದು, ಸಿಎಂ ಬಿಎಸ್ವೈಗೆ ಇನ್ಯಾವ ಕಾಟ ಶುರುವಾಗುತ್ತೆ ಕಾದು ನೋಡಬೇಕು.
ಈ ಎಲ್ಲ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಮೂಲಕ 17 ಜನ ಸಚಿವರು ಬಿಎಸ್ವೈ ಸರ್ಕಾರದ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು.