ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಜಮೀನಿನಲ್ಲಿ ಬರೋಬ್ಬರಿ 4 ಕೋಟಿ ಮೌಲ್ಯದ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನ ರಾಂಪುರ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 4ರಂದು ಪೊಲೀಸರು ದಾಳಿ ನಡೆಸಿದ್ರು. ಅಂದು ಆರೋಪಿ ರುದ್ರೇಶ ಎಸ್ಕೇಪ್ ಆಗಿದ್ದ. ಇಂದು ಆತನನ್ನ ಬಂಧಿಸಲಾಗಿದೆ.
ಅಂದು ದಾಳಿ ವೇಳೆ 9,871.73 ಕೆಜಿಯ 8,250 ಗಾಂಜಾ ಗಿಡಗಳನ್ನ ವಶ ಪಡಿಸಿಕೊಳ್ಳಲಾಗಿತ್ತು ಮೂಲತಃ ಬಳ್ಳಾರಿಯ ಸಂಡೂರಿನ ರುದ್ರೇಶ, ರಾಂಪುರ ಬಳಿ 4 ಎಕೆರೆ 20 ಗುಂಟೆ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದಿದ್ದ. ಇದೀಗ ಜಮೀನು ಮಾಲೀಕ, ಮಧ್ಯವರ್ತಿ ಹಾಗೂ ರುದ್ರೇಶನನ್ನ ಬಂಧಿಸಲಾಗಿದೆ.