ಪ್ರಜಾಸ್ತ್ರ ಅಪರಾಧ ಸುದ್ದಿ
ಸಿಂದಗಿ: ಕಳೆದ ಜುಲೈ 13ರಂದು ಯಂಕಂಚಿ ರಸ್ತೆಯಿಂದ ಸುಂಗಠಾಣ ಕಡೆಗೆ ಹೋಗುವ ಮಾರ್ಗಮಧ್ಯೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟೇಲರ್ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಾಲೀಕರಾದ ರಮೇಶ ಅಸ್ಕಿ ಎಂಬುವರು ದೂರು ದಾಖಲಿಸಿದ್ರು. ಈ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ.
ಆರೋಪಿಗಳಾದ ಹುಸೇನ ನದಾಫ(24), ಸಮೀರ ನದಾಫ(20), ರವಿಕುಮಾರ ಮಾದರ(24) ಹಾಗೂ ಪೈಗಂಬರ ನದಾಫ(20) ಎಂಬುವರನ್ನ ಬಂಧಿಸಲಾಗಿದೆ. ಇವರೆಲ್ಲರು ಸಿಂದಗಿ ತಾಲೂಕಿನ ಗುತ್ತರಗಿ ಗ್ರಾಮದವರಾಗಿದ್ದಾರೆ. ಇವರಿಂದ 8 ಟ್ರ್ಯಾಕ್ಟರ್ ಟೇಲರ್, 1 ಬೈಕ್, 1 ಟ್ರ್ಯಾಕ್ಟರ್ ಇಂಜನ್, ನೇಗಿಲು ಜೋಡಿಸಿರುವ ಟ್ರ್ಯಾಕ್ಟರ್ ಇಂಜನ್ ಸೇರಿದಂತೆ ಸುಮಾರು 14 ಲಕ್ಷದ 93 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಇಂಡಿ ಉಪವಿಭಾಗದ ಪ್ರಭಾರ ಡಿಎಸ್ಪಿ ಟಿ.ಎಸ್ ಸುಲ್ಫಿ ಅವರ ನೇತೃತ್ವದಲ್ಲಿ ಸಿಂದಗಿಯ ಸಿಪಿಐ ಸತೀಶಕುಮಾರ ಕಾಂಬಳೆ, ಪಿಎಸ್ಐ ಹೆಚ್.ಎಸ್ ಹೊಸಮನಿ ಹಾಗೂ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ, ಈ ನಾಲ್ವರು ಖತರ್ನಾಕ್ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.