ಚಂದನವನದ ಮಾಸ್ ಆ್ಯಂಡ್ ಕ್ಲಾಸ್ ಹೀರೋ ಅಂದ್ರೆ ಪವರ್ ಸ್ಟಾರ್ ಪುನೀತರಾಜಕುಮಾರ. ನಟನೆ, ಹಿನ್ನಲೆ ಗಾಯನ ಸೇರಿದಂತೆ ಸಿನಿಮಾ ಪ್ರೊಡಕ್ಷನ್ ನಲ್ಲಿ ಅಪ್ಪು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದೀಗ ಅವರ ತಲೆಯಲ್ಲಿ ಹೊಸದೊಂದು ಐಡಿಯಾ ಓಡಾಡ್ತಿದೆ.
ಪಿಆರ್ ಕೆ ಪ್ರೊಡಕ್ಷನ್ ಹೌಸ್ ಮೂಲಕ ಈಗಾಗ್ಲೇ ಕವಲುದಾರಿ, ಮಾಯಾ ಬಜಾರ್ ಅನ್ನೋ ಸಿನ್ಮಾಗಳನ್ನ ನೀಡಿರುವ ಪುನೀತರಾಜಕುಮಾರ, ಮಕ್ಕಳ ಸಿನ್ಮಾವೊಂದು ಮಾಡುವ ಯೋಚನೆ ಮಾಡಿದ್ದಾರಂತೆ. ಬಾಲನಟನಾಗಿ ಸಿನಿ ರಂಗಕ್ಕೆ ಎಂಟ್ರಿಕೊಟ್ಟಿರುವ ಅಪ್ಪು ರಾಷ್ಟ್ರಪ್ರಶಸ್ತಿ ಸಹ ಪಡೆದವರು. ಅಲ್ದೇ ಸಾಕಷ್ಟು ಮಕ್ಕಳ ಸಿನಿಮಾ ನೋಡಿದ ಪವರ್ ಸ್ಟಾರ್ ಮಕ್ಕಳ ಚಿತ್ರ ಮಾಡುವ ಬಗ್ಗೆ ಯೋಚನೆ ಮಾಡ್ತಿದ್ದಾರೆ.
ತಮ್ಮ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ತಿರುವ ಪುನೀತರಾಜಕುಮಾರ, ಇದೀಗ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡ್ತಿದ್ದಾರೆ. ಒಂದೊಳ್ಳೆ ಮಕ್ಕಳ ಕಥೆ ಸಿಕ್ರೆ ಪುನೀತರಾಜಕುಮಾರ ಮೂವಿ ಮಾಡುವುದು ಫಿಕ್ಸ್ ಆಗಿದೆ.