ಮಂಡ್ಯ: ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದಿನಿಂದ ರಾಜ್ಯದಲ್ಲಿರುವ ಎಂಎಸ್ಐಎಲ್ ಮದ್ಯ ಮಾರಟ ಮಳಗೆಗಳು ಓಪನ್ ಆಗಿವೆ. ಜನರು ಬಾರ್ ಮುಂದೆ ಕಿಕ್ಕಿರಿದು ಸೇರಿದ್ದಾರೆ. ಇದನ್ನ ಬಂಡವಾಳ ಮಾಡಿಕೊಂಡಿರುವ ಕೆಲವರು ಡಬಲ್ ರೇಟಿಗೆ ಮಾರಾಟ ಮಾಡ್ತಿದ್ದಾರೆ.
ಮಂಡ್ಯ ತಾಲೂಕು ಬಸರಾಳು ಹೋಬಳಿ ಪಟ್ಟಣದ ವ್ಯಾಪ್ತಿಯಲ್ಲಿನ ವೈನ್ ಶಾಪ್ ಗಳಲ್ಲಿ ಎಂಆರ್ಪಿ ರೇಟಿಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡಲಾಗ್ತಿದೆ. ಬಸರಾಳಿನ ಧನಲಕ್ಷ್ಮಿ ವೈನ್ ಶಾಪ್ ನೆಲ್ಲಿ ಎಂಆರ್ಪಿ ದರಕಿಂತ ಎರಡು ಪಟ್ಟು ದುಬಾರಿ ಬೆಲೆಯಲ್ಲಿ ಮದ್ಯ ಮಾರಾಟದ ಸೂಲಿಗೆ ನಡೆದಿದೆ. ಇದರ ಮಾಹಿತಿ ಸಿಕ್ಕ ತಕ್ಷಣ ಗ್ರಾಮಪಂಚಾಯಿತಿ ಅಧ್ಯಕ್ಷ ಮಹಾಲಿಂಗಪ್ಪ, ಮದ್ಯದಂಗಡಿ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ವೈನ್ ಶಾಪ್ ಮುಂದೆ ಬ್ಯಾರಿಕೇಡ್ ಇಲ್ಲ. ಮಾಸ್ಕ್ ಧರಿಸಿಕೊಂಡಿಲ್ಲ. ಸಾಮಾಜಿಕ ಅಂತರವಿಲ್ಲ. ಹೀಗೆ ಎಲ್ಲ ನಿಯಮಗಳನ್ನ ಗಾಳಿಗೆ ತೂರಿ ನೂಕುನುಗ್ಗಲು ನಡೆದಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.