ವಿಜಯಪುರ: ಕರ್ತವ್ಯದಲ್ಲಿದ್ದ ಎಎಸ್ಪಿಗೆಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ, ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಎಎಸ್ಪಿ ಡಾ.ರಾಮ ಅರಸಿದ್ಧಿ ಅವರು ಗಾಯಗೊಂಡಿದ್ದಾರೆ.
ನಗರದ ಕಾಮತ ಹೊಟೇಲ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ಸ್ಪೀಡ್ ಆಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಮುಖಕ್ಕೆ ಎರಡು ಕಡೆ ಗಾಯಗಳಾಗಿವೆ. ಎಎಸ್ಪಿ ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ವೈ.ಎಸ್ ಪಟೀಲ, ಎಸ್ಪಿ ಅನುಪಮ ಅಗರ್ವಾಲ್ ಸೇರಿ ಇತರೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.