ಲಾಕ್ ಡೌನ್ ನಿಂದಾಗಿ ಬಡವರು, ನಿಗರ್ತಿಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅನೇಕರು ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸಿನಿ ಮಂದಿ ಸಹ ಸಹಾಯ ಹಸ್ತ ಚಾಚಿದ್ದಾರೆ. ಆದ್ರೆ, ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್, ಸಹಾಯದ ಬಗ್ಗೆ ಭರ್ಜರಿ ಸುದ್ದಿ ಹರಿದಾಡಿದೆ.
1 ಕೆಜಿ ಗೋಧಿ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂಪಾಯಿ ಇಟ್ಟಿದ್ದಾರೆ. ಮುಂಬೈ ಸ್ಲಂ ಏರಿಯಾಗಳಲ್ಲಿ ರಾತ್ರಿ ಅದನ್ನ ಹಂಚಿದ್ದಾರೆ. 1 ಕೆಜಿ ಗೋಧಿ ಹಿಟ್ಟು ಅಂದಾಗ ಅನೇಕರು ಹೋಗಿಲ್ಲ. ಕೆಲವರು ಹೋಗಿ ತಂದಾಗ ಹಿಟ್ಟಿನ ಜೊತೆಗೆ 15 ಸಾವಿರ ಇಟ್ಟಿದ್ದಾರೆ ಅನ್ನೋದು ಗೊತ್ತಾಗಿದೆ ಎಂದು.
ಇನ್ನು ದೆಹಲಿಯಲ್ಲಿ ಟ್ರಕ್ ನಲ್ಲಿ ಗೋಧಿ ಹಿಟ್ಟಿನ ಚೀಲ ಕಳುಹಿಸಿದ್ದಾರೆ. ಅದರಲ್ಲಿಯೂ 15 ಸಾವಿರ ರೂಪಾಯಿ ಇಟ್ಟಿದ್ದಾರೆ. ಮೊದ ಮೊದಲು ಯಾರೂ ತೆಗೆದುಕೊಂಡಿಲ್ಲ. 1 ಕೆಜಿ ಗೋಧಿ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂಪಾಯಿ ಇಟ್ಟಿದ್ದಾರೆ ಎಂದಾಕ್ಷಣ ಪಡೆದಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದನ್ನ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿ, ಆಮೀರ್ ಖಾನ್ ಬಗ್ಗೆ ಹೊಗಳಿ ಬರೆದಿದ್ದಾರೆ. ಆದ್ರೆ, ಇದು ಸುಳ್ಳು ಎಂದು ಸ್ವತಃ ನಟ ಆಮೀರ್ ಹೇಳಿದ್ದಾರೆ.
ನಾನು ಗೋಧಿ ಚೀಲದಲ್ಲಿ ಹಣವನ್ನ ಇಡುವ ವ್ಯಕ್ತಿಯಲ್ಲ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ. ರಾಬಿನ್ ಹುಡ್ ತನ್ನನ್ನು ತಾನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ಸುರಕ್ಷಿತವಾಗಿರಿ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಹಾಗಾದ್ರೆ, ಈ ರೀತಿಯ ಸುದ್ದಿ ಹರಿಬಿಟ್ಟವರು ಯಾರು? ಆ ವಿಡಿಯೋ ಡಿಲಿಟ್ ಆಗಿದ್ಯಾಕೆ ಅನ್ನೋ ಪ್ರಶ್ನೆಗಳು ಮೂಡಿವೆ.